‘ನಟ ಶೋಭರಾಜ್ ಪಾವೂರು ಮೋದಿ ಅವರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಆದರೆ, ಪೆಟ್ರೋಲ್ ದರ ಏರಿಕೆಯ ಜನರ ಸಂಕಷ್ಟವನ್ನು ವಿರೋಧಿಸಿದ್ದಕ್ಕೆ ದ್ರೋಹಿ ಆಗಿಬಿಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ನಟ ಅರವಿಂದ ಬೋಳಾರ್ ನಕಲಿ ಜ್ಯೋತಿಷಿಗಳನ್ನು ವಿಡಂಬನೆ ಮಾಡಿದಾಗಲೂ, ಮೋದಿ ಅನುಯಾಯಿಗಳು ದಾಳಿ ನಡೆಸಿದ್ದರು. ಅಸಹನೀಯ ಕಮೆಂಟ್ ಮಾಡುತ್ತಿರುವುದು ಅವರ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಮೌಢ್ಯ, ವಂಚನೆ ಹಾಗೂ ಜನರ ಸಮಸ್ಯೆ ಬಗ್ಗೆ ದನಿ ಎತ್ತದಂತೆ ದಮನಿಸುವುದು ಅತಿರೇಕ ಹಾಗೂ ಅಪಾಯಕಾರಿ. ರಂಗಭೂಮಿ, ಸಿನಿಮಾ, ಬರಹಗಾರರು, ಕಲಾವಿದರು ಸೇರಿದಂತೆ ಪ್ರಜ್ಞಾವಂತ ನಾಗರಿಕರು ಧ್ವನಿ ಎತ್ತಬೇಕು’ ಎಂದು ಮುನೀರ್ ಕಾಟಿಪಳ್ಳ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.