‘ಈ ಹಿಂದೆ ಅಪರಾಧ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಅನಿಶ್ ಅಶ್ರಫ್ ಮತ್ತು ಅಬ್ದುಲ್ ಖಾದರ್ ಫಹಾದ್ ಸಹಚರರ ಕೂಟ ಕಟ್ಟಿಕೊಂಡು ಸಾರ್ವಜನಿಕರನ್ನು, ಶ್ರೀಮಂತರನ್ನು, ವ್ಯಾಪಾರಿಗಳನ್ನು ಬೆದರಿಸಿ ದರೋಡೆ ಮಾಡಲು ಸಂಚು ರೂಪಿಸುತ್ತಿದ್ದ ಬಗ್ಗೆ ಅಜೀಜುದ್ದೀನ್ ರಸ್ತೆ, ಕಂಡತ್ತ್ ಪಳ್ಳಿ ಪ್ರದೇಶದಿಂದ ಮಾಹಿತಿ ಬಂದಿತ್ತು. ಇದರ ಆಧಾರದಲ್ಲಿ ಮಧ್ಯಾಹ್ನ 2.30 ಗಂಟೆ ವೇಳೆಗೆ ಸ್ಥಳಕ್ಕೆ ಧಾವಿಸಿದಾಗ ಅನಿಶ್ ಅಶ್ರಪ್ ಮತ್ತು ಅಬ್ದುಲ್ ಖಾದರ್ ಫಹಾದ್ ಸಹಿತ ಆರು ಮಂದಿ ಮೊಯಿದ್ದೀನ್ ಮಸೀದಿಯ ಹಿಂಭಾಗದ ಖಾಲಿ ಜಾಗದಲ್ಲಿ ಗುಂಪು ಸೇರಿದ್ದರು. ಅವರಲ್ಲಿ ಮೂವರ ಬಳಿ ಮಾರಕಾಯುಧಗಳಿದ್ದವು. ಅವರನ್ನು ಹಿಡಿಯಲು ಮುಂದಾದಾಗ ತಲವಾರು ಹಿಡಿದುಕೊಂಡಿದ್ದ ಒಬ್ಬ ವ್ಯಕ್ತಿ ಮತ್ತು ಅಬ್ದುಲ್ ಖಾದರ್ ಫಹಾದ್ ಬೈಕ್ನಲ್ಲಿ ಪರಾರಿಯಾದರು. ಇನ್ನುಳಿದ ನಾಲ್ವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.