ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ನರಗುಂದ ಎಂ.ಡಿ. ಮಾತನಾಡಿ, ‘ಸಂವಿಧಾನ ದಿನಾಚರಣೆ ಮಾಡುವಾಗ ವಕೀಲರು ಒಂದು ದಿನದ ಬಗ್ಗೆ ಮಾತ್ರ ಚಿಂತನೆ ಮಾಡದೆ ಮುಂದಿನ 50 ವರ್ಷಗಳಲ್ಲಿ ನ್ಯಾಯಾಂಗ ವ್ಯವಸ್ಥೆ ಹೇಗಿರಬಹುದೆಂಬ ಕನಸು ಕಾಣಬೇಕು. ವೃತ್ತಿಯಲ್ಲಿ ಆಸೆಗಳು ಇದ್ದೇ ಇರುತ್ತದೆ. ಆದರೆ, ನಾವು ವಕೀಲರಾಗಲು ಅವಕಾಶ ಮಾಡಿಕೊಟ್ಟಿರುವುದು ನಮ್ಮ ತಂದೆ- ತಾಯಿ ಮಾತ್ರವಲ್ಲ ಇಡೀ ಸಮಾಜ. ಹಾಗಾಗಿ, ನಾವು ಸಮಾಜಕ್ಕೆ ಏನು ಕೊಡಬಹುದೆಂದು ಚಿಂತನೆ ಮಾಡಬೇಕು ಎಂದರು.