ಮೂಡುಬಿದಿರೆ: ಹೈದರಾಬಾದ್ನ ಹಿರಿಯ ಚಿತ್ರಕಲಾವಿದ ಸೂರ್ಯಪ್ರಕಾಶ್ ಅವರನ್ನು ಆಳ್ವಾಸ್ ವರ್ಣ ವಿರಾಸತ್–2019 ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇದೇ 6ರಂದು ವಿದ್ಯಾಗಿರಿಯಲ್ಲಿ ನಡೆಯುವ ಆಳ್ವಾಸ್ ವಿರಾಸತ್ನ ಸಮಾರೋಪದಲ್ಲಿ ₹ 25 ಸಾವಿರ ನಗದು ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.