‘ಶುಕ್ರವಾರ ತಡರಾತ್ರಿ 3 ಗಂಟೆಯವರೆಗೂ ವಿಮಾನ ಸಂಸ್ಥೆಯ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದೇ ಹಿಂದಿರುಗಬೇಕಾಯಿತು. ಸಂಬಂಧಿಕರು ಸಂಬಂಧಪಟ್ಟ ಪ್ರಯೋಗಾಲಯದ ಹಿರಿಯ ಅಧಿಕಾರಿಯಿಂದಲೇ ಸ್ಪಷ್ಟಪಡಿಸಿದರೂ, ಸ್ಪೈಸ್ ಜೆಟ್ ಅಧಿಕಾರಿಗಳು ಪ್ರಯಾಣಕ್ಕೆ ಅವಕಾಶ ನೀಡಲಿಲ್ಲ. ಶನಿವಾರ ಮತ್ತೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆಗೆ ಒಳಗಾಗಬೇಕಾಯಿತು’ ಎಂದು ಅವರ ಸಹೋದರ ಝಾಕಿರ್ ಹುಸೇನ್ ಹೇಳಿದ್ದಾರೆ.