ಸ್ವಾಮಿ ವಿವೇಕಾನಂದ, ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ರಂತಹ ವ್ಯಕ್ತಿಗಳನ್ನು ಇಂದಿನ ಯುವಜನತೆ ಸ್ಫೂರ್ತಿಯಾಗಿ ಪರಿಗಣಿಸಿ, ಮಾದರಿ ವ್ಯಕ್ತಿಗಳಾಗಿ ಬದುಕಬೇಕು. ಮಗು ಹುಟ್ಟುವಾಗ ಅತ್ತು ಉಳಿದವರೆಲ್ಲ ನಕ್ಕರೆ, ಸತ್ತಾಗ ಅವನು ನಕ್ಕು, ಉಳಿದವರು ಅಳುವ ಹಾಗೆ ಬಾಳಬೇಕು. ಇವೆಲ್ಲ ಸಾಧ್ಯವಾಗುವುದು ಮನುಷ್ಯ ಅತ್ಯುತ್ತಮ ವ್ಯಕ್ತಿತ್ವ ಬೆಳೆಸಿಕೊಂಡಾಗ ಮಾತ್ರ ಎಂದು ಹೇಳಿದರು.