ಉಳ್ಳಾಲ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದ ಘಟನೆ ಉಳ್ಳಾಲದಲ್ಲಿ ಮಂಗಳವಾರ ನಡೆದಿದೆ.
ಗ್ಯಾಸ್ ದುರಸ್ತಿ ಮಾಡುವ ಅಂಗಡಿ ಹೊಂದಿರುವ ಉಳಿಯ ನಿವಾಸಿ ಹರೀಶ್ ಗಾಣಿಗ (42) ಚೂರಿ ಇರಿತಕ್ಕೆ ಒಳಗಾದವರು. ಕೆಲವು ದಿನಗಳ ಹಿಂದೆ ಆರೋಪಿ ಬಾಲಕ, ಹರೀಶ್ ಗಾಣಿಗ ಜೊತೆ ಜಗಳ ಮಾಡಿದ್ದ ಎನ್ನಲಾಗಿದ್ದು, ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು.
ಇದರಿಂದ ಕೋಪಗೊಂಡ ಆರೋಪಿ, ಹರೀಶ್ ಅವರ ಅಂಗಡಿ ಬಳಿಬಂದು ಗಲಾಟೆ ಮಾಡಿ, ಚೂರಿಯಿಂದ ಇರಿದಿದ್ದಾನೆ ಎನ್ನಲಾಗಿದೆ. ಹರೀಶ್ ಗಾಣಿಗ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಹರೀಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ.