ಈಚೆಗೆ ರಸ್ತೆ ಅಭಿವೃದ್ಧಿ ಮಾಡಿದ ಸಂದರ್ಭದಲ್ಲಿ ಆರ್ತಾಜೆ ಮೋರಿಯನ್ನು ನಿರ್ಮಿಸಲಾಗಿದೆ. ಅದು ಜಲಾವೃತವಾದ ಕಾರಣ ನಾಗರಿಕರು, ವಾಹನ ಸವಾರರು ತೀವ್ರ ತೊಂದರೆಗೀಡಾದರು. ಪೇಟೆಯಿಂದ ಮನೆಗೆ ತೆರಳಲು ತಯಾರಾಗಿದ್ದವರಿಗೆ ಸಮಸ್ಯೆಯಾಯಿತು. 2 ಗಂಟೆ ಕಾದು ನೀರು ಇಳಿಕೆಯಾದ ಬಳಿಕ ತೆರಳಿದರು. ಉಮೇಶ್ ಎಂಬುವರ ತೋಟವೂ ಸಂಪೂರ್ಣ ಜಲಾವೃತಗೊಂಡಿತ್ತು.