<p><strong>ಸುಳ್ಯ(ದಕ್ಷಿಣ ಕನ್ನಡ):</strong> ಸುಳ್ಯ ಸಮೀಪದ ಪೆರಾಜೆ ಕಲ್ಚರ್ಪೆ ಬಳಿ ಭಾನುವಾರ ರಾತ್ರಿ ಕಾಡಾನೆಯೊಂದು ಬಾವಿಗೆ ಬಿದ್ದಿದ್ದು, ಅದನ್ನು ರಕ್ಷಣೆ ಮಾಡಲಾಯಿತು. </p><p>ಕಲ್ಚರ್ಪೆಯ ದಮಂಯಂತಿ ಅವರ ಮನೆಯ ಸಮೀಪದ ತೊಟದ ಬಳಿ ಬಾವಿ ಇತ್ತು. ಈ ಬಾವಿಯು ಸುಮಾರು 16 ಅಡಿಗಳಷ್ಟು ಆಳವಿದ್ದು, ಅದರ ನೀರು ಬೇಸಿಗೆಯಲ್ಲಿ ಬತ್ತುತ್ತದೆ. ಆಹಾರ ಅರಸಿ ತೋಟದ ಕಡೆಗೆ ಬಂದಿದ್ದ ಆನೆಯ ಹಿಂಡಿನಿಂದ ತಪ್ಪಿಸಿಕೊಂಡಿದ್ದ ಮರಿಯಾನೆ ಬಾವಿಯೊಳಗೆ ಬಿದ್ದಿತ್ತು ಎಂದು ಸ್ಥಳಿಯರು ತಿಳಿಸಿದ್ದಾರೆ.</p><p>ಆನೆ ಬಾವಿಗೆ ಬಿದ್ದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೆವು. ಅವರು ಹಿಟಾಚಿ ಯಂತ್ರವನ್ನು ತರಿಸಿ ಬಾವಿಯಿಂದ ಆನೆ ಮರಿಯು ಮೇಲಕ್ಕೆ ಬರಲು ದಾರಿ ಮಾಡಿಕೊಟ್ಟರು. ಬೆಳಿಗ್ಗೆ ಆರಂಭವಾದ ರಕ್ಷಣಾ ಕಾರ್ಯಾಚರಣೆ ಸಂಜೆ 4.30ರ ವರೆಗೂ ಮುಂದುವರಿದಿತ್ತು. ಬಾವಿಯಿಂದ ಮೇಲಕ್ಕೆ ಬಂದ ಆನೆಯು ಕಾಡನ್ನು ಸೇರಿದೆ ಎಂದು ಅವರು ಮಾಹಿತಿ ನೀಡಿದರು.</p><p>‘ಎರಡು ದಿನಗಳ ಹಿಂದೆ ಕಲ್ಚರ್ಪೆ ಪರಿಸರದಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿತ್ತು. ಆ ಹಿಂಡಿನಲ್ಲೂ ಒಂದು ಮರಿಯಾನೆ ಇತ್ತು. ಆ ಮರಿಯಾನೆಯೇ ಬಾವಿಗೆ ಬಿದ್ದಿರುವ ಸಾಧ್ಯತೆ ಇದೆ’ ಎಂದು ಸ್ಥಳೀಯರೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದರು. </p><p>ಅರಣ್ಯ ಇಲಾಖೆ ತಂಡ ಸ್ಥಳದಲ್ಲೇ ಇದ್ದು, ಈ ಪರಿಸರದಲ್ಲಿ ಕಾಡಾನೆಗಳ ಚಲನವಲನಗಳ ಮೇಲೆ ನಿಗಾ ಇಟ್ಟಿದೆ.</p>.ದಕ್ಷಿಣ ಕನ್ನಡ: ಪೆರಾಜೆ ಬಳಿ ಬಾವಿಗೆ ಬಿದ್ದ ಕಾಡಾನೆ.ಚಿಂಚೋಳಿ: ಶ್ರೀಗಂಧದ ಮರ ಕಡಿದು ಕಳವು ಮಾಡುವಾಗ ಬಾವಿಗೆ ಬಿದ್ದ ಯುವಕ ಪೊಲೀಸರ ಬಲೆಗೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಳ್ಯ(ದಕ್ಷಿಣ ಕನ್ನಡ):</strong> ಸುಳ್ಯ ಸಮೀಪದ ಪೆರಾಜೆ ಕಲ್ಚರ್ಪೆ ಬಳಿ ಭಾನುವಾರ ರಾತ್ರಿ ಕಾಡಾನೆಯೊಂದು ಬಾವಿಗೆ ಬಿದ್ದಿದ್ದು, ಅದನ್ನು ರಕ್ಷಣೆ ಮಾಡಲಾಯಿತು. </p><p>ಕಲ್ಚರ್ಪೆಯ ದಮಂಯಂತಿ ಅವರ ಮನೆಯ ಸಮೀಪದ ತೊಟದ ಬಳಿ ಬಾವಿ ಇತ್ತು. ಈ ಬಾವಿಯು ಸುಮಾರು 16 ಅಡಿಗಳಷ್ಟು ಆಳವಿದ್ದು, ಅದರ ನೀರು ಬೇಸಿಗೆಯಲ್ಲಿ ಬತ್ತುತ್ತದೆ. ಆಹಾರ ಅರಸಿ ತೋಟದ ಕಡೆಗೆ ಬಂದಿದ್ದ ಆನೆಯ ಹಿಂಡಿನಿಂದ ತಪ್ಪಿಸಿಕೊಂಡಿದ್ದ ಮರಿಯಾನೆ ಬಾವಿಯೊಳಗೆ ಬಿದ್ದಿತ್ತು ಎಂದು ಸ್ಥಳಿಯರು ತಿಳಿಸಿದ್ದಾರೆ.</p><p>ಆನೆ ಬಾವಿಗೆ ಬಿದ್ದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೆವು. ಅವರು ಹಿಟಾಚಿ ಯಂತ್ರವನ್ನು ತರಿಸಿ ಬಾವಿಯಿಂದ ಆನೆ ಮರಿಯು ಮೇಲಕ್ಕೆ ಬರಲು ದಾರಿ ಮಾಡಿಕೊಟ್ಟರು. ಬೆಳಿಗ್ಗೆ ಆರಂಭವಾದ ರಕ್ಷಣಾ ಕಾರ್ಯಾಚರಣೆ ಸಂಜೆ 4.30ರ ವರೆಗೂ ಮುಂದುವರಿದಿತ್ತು. ಬಾವಿಯಿಂದ ಮೇಲಕ್ಕೆ ಬಂದ ಆನೆಯು ಕಾಡನ್ನು ಸೇರಿದೆ ಎಂದು ಅವರು ಮಾಹಿತಿ ನೀಡಿದರು.</p><p>‘ಎರಡು ದಿನಗಳ ಹಿಂದೆ ಕಲ್ಚರ್ಪೆ ಪರಿಸರದಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿತ್ತು. ಆ ಹಿಂಡಿನಲ್ಲೂ ಒಂದು ಮರಿಯಾನೆ ಇತ್ತು. ಆ ಮರಿಯಾನೆಯೇ ಬಾವಿಗೆ ಬಿದ್ದಿರುವ ಸಾಧ್ಯತೆ ಇದೆ’ ಎಂದು ಸ್ಥಳೀಯರೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದರು. </p><p>ಅರಣ್ಯ ಇಲಾಖೆ ತಂಡ ಸ್ಥಳದಲ್ಲೇ ಇದ್ದು, ಈ ಪರಿಸರದಲ್ಲಿ ಕಾಡಾನೆಗಳ ಚಲನವಲನಗಳ ಮೇಲೆ ನಿಗಾ ಇಟ್ಟಿದೆ.</p>.ದಕ್ಷಿಣ ಕನ್ನಡ: ಪೆರಾಜೆ ಬಳಿ ಬಾವಿಗೆ ಬಿದ್ದ ಕಾಡಾನೆ.ಚಿಂಚೋಳಿ: ಶ್ರೀಗಂಧದ ಮರ ಕಡಿದು ಕಳವು ಮಾಡುವಾಗ ಬಾವಿಗೆ ಬಿದ್ದ ಯುವಕ ಪೊಲೀಸರ ಬಲೆಗೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>