₹ 1.50 ಕೋಟಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣದ ಮೂಲಸೌಕರ್ಯ ಮೇಲ್ದರ್ಜೆಗೆ ಏರಿಸಲಾಗುವುದು. ಈಗಾಗಲೇ ₹50ಲಕ್ಷ ಬಿಡುಗಡೆಯಾಗಿದೆ. ₹1 ಕೋಟಿ ವೆಚ್ಚದಲ್ಲಿ ರಸ್ತೆ, ಪಾರ್ಕಿಂಗ್, ಶೆಲ್ಟರ್, ಎಲ್ಇಡಿ ಲೈಟ್ ಅಳವಡಿಕೆ ಮತ್ತಿತರ ಕಾಮಗಾರಿ ನಡೆಯಲಿದೆ ಎಂದರು. ಕೊಂಕಣ ರೈಲ್ವೆ ನಿಗಮವಾಗಿರುವುದರಿಂದ ಸೀಮಿತ ಆದಾಯದಲ್ಲಿ ಅಭಿವೃದ್ಧಿ ಮಾಡುವುದು ಇಲಾಖೆಗೆ ಕಷ್ಟವಾದ ಕಾರಣ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿರುವ ಏಕೈಕ ಸುರತ್ಕಲ್ ನಿಲ್ದಾಣವನ್ನು ಸ್ಮಾರ್ಟ್ ರೈಲ್ವೆ ನಿಲ್ದಾಣ ಮಾಡುವಲ್ಲಿ ಹಂತ ಹಂತವಾಗಿ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು. ರೈಲ್ವೆ ಇಲಾಖೆ ಸಿಎಂಡಿ ಸಂಜಯ್ ಗುಪ್ತ, ಕಾರವಾರ ರೀಜನ್ ರೈಲ್ವೆ ಮ್ಯಾನೇಜರ್ ಬಿ.ಬಿ.ನಿಕ್ಕಮ್, ಹಿರಿಯ ಆರ್ಟಿಎಂ ವಿನಯ್ ಕುಮಾರ್, ಪಬ್ಲಿಕ್ ರಿಲೇಷನ್ ಅಧಿಕಾರಿ ಸುಧಾ ಕೃಷ್ಣಮೂರ್ತಿ, ಎಟಿಎಂ ಜಿ.ಡಿ ಮೀನ, ಸುರತ್ಕಲ್ ನಾಗರಿಕ ಸಲಹಾ ಸಮಿತಿ ಪದಾಧಿಕಾರಿಗಳು ಇದ್ದರು.