ಸುರತ್ಕಲ್ನಿಂದ ನಂತೂರುವರೆಗಿನ ಹೆದ್ದಾರಿಗೆ ಸಂಬಂಧಿಸಿದ ಸುಂಕವನ್ನು ಡಿ. 1ರಿಂದ ಸುರತ್ಕಲ್ ಟೋಲ್ಗೇಟ್ ಬದಲು ಹೆಜಮಾಡಿ ಟೋಲ್ಗೇಟ್ನಲ್ಲೇ ವಾಹನಗಳಿಂದ ಸಂಗ್ರಹಿಸಲು ಸಿದ್ಧತೆ ನಡೆದಿದೆ. ಸುಂಕ ವಸೂಲಿ ಮಾಡುವ ಸ್ಥಳವನ್ನಷ್ಟೇ ಬದಲಾವಣೆ ಮಾಡಿ, ಸುಂಕದ ಪ್ರಮಾಣವನ್ನು ಕಿಂಚಿತ್ ಕೂಡಾ ಕಡಿಮೆ ಮಾಡದಿರುವ ಸರ್ಕಾರದ ಕ್ರಮವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.