ನಿವೃತ್ತ ಯೋಧರೂ ಆಗಿರುವ ಅವರು, ನೆರೆ ಬಂದ ಬಳಿಕ ಹಲವಾರು ಬಾರಿ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ
ನೀಡಿದ್ದಾರೆ. ಜನತೆಯೇ ಹೋಗಲು ಕಷ್ಟಪಡುತ್ತಿದ್ದ ಪ್ರದೇಶ, ಸಂತ್ರಸ್ತರಿದ್ದ ಸ್ಥಳ ಹಾಗೂ ಪರಿಹಾರ ಕೇಂದ್ರಗಳಿಗೆ ತೆರಳಿ ಸಮಸ್ಯೆಗೆ ಸ್ಪಂದಿಸಿದ್ದಾರೆ. ಈ ಪೈಕಿ ದ್ವೀಪದಂತಾಗಿರುವ ಇಲ್ಲಿನ ಹೊಸಮಠ, ಅನಾರು, ಬಾಂಜಾರು ಮಲೆಗೆ ಸ್ವತಃತೆರಳಿ ಧೈರ್ಯ ತುಂಬಿದ್ದಾರೆ. ಜೀವನಾವಶ್ಯಕ ವಸ್ತುಗಳನ್ನು ಹೊತ್ತೊಯ್ದು ನೀಡಿದ್ದಾರೆ.