ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಂಚಿನ ಗ್ರಾಮಗಳಲ್ಲಿ ಮೋಹನಕುಮಾರಿ ಪ್ರಚಾರ

Last Updated 6 ಮೇ 2018, 8:41 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಇಲ್ಲಿನ ವಿಧಾನ ಸಭಾ ಕ್ಷೇತ್ರದ ಹಂಗಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಸಿ.ಮೋಹನಕುಮಾರಿ ಮತಯಾಚನೆ ಮಾಡಿದರು.

ಶನಿವಾರ ಬೆಳಿಗ್ಗೆ ಬಂಡೀಪುರ, ಕಾರೇಮಾಳ, ಚೆನ್ನಿಕಟ್ಟೆ, ಹಾಡಿನ ಕಣಿವೆ, ಮಂಗಲ, ಜಕ್ಕಹಳ್ಳಿ, ಕಾರಾಗಿಹುಂಡಿ, ಗುಡ್ಡೆಕೆರೆ, ಬೂರದಾರಹುಂಡಿ, ಕಣಿಯನಪುರ, ಏಲಚೆಟ್ಟಿ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೋಹನಕುಮಾರಿ, ಆಕಸ್ಮಿಕವಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಕಳೆದ ಹನ್ನೊಂದು ತಿಂಗಳಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ನಾನು ಸಾಹಿತಿಯಾಗಿ ಮನೆಯಲ್ಲಿ ಕುಳಿತು ಪತಿಯ ಕಾರ್ಯಗಳಿಗೆ ಸಹಕರಿಸುತ್ತಿದ್ದೆ, ಆದರೆ ಈಗ ನಾನೆ ಅವರ ಸ್ಥಾನ ತುಂಬುವ ಪರಿಸ್ಥಿತಿ ಎದುರಾಗಿದೆ, ಜೀವನದಲ್ಲಿ ನಾನು ಯಾವ ವಿಚಾರಕ್ಕೂ ಹೆಚ್ಚು ಆಸೆ ಪಟ್ಟಿಲ್ಲ. ಆಸೆ ಪಟ್ಟಿರುವುದು ಒಂದಕ್ಕೆ ಮಾತ್ರ, ಅದು ಜನರ ಪ್ರೀತಿಗೆ. ಅದನ್ನು ಉಪಚುನಾವಣೆಯಲ್ಲಿಯೇ ನೋಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ನಂಜಪ್ಪ, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ಯುವ ಮುಖಂಡ ಗಣೇಶ್ ಪ್ರಸಾದ್, ಜಿ.ಪಂ ಸದಸ್ಯ ಬೊಮ್ಮಯ್ಯ, ಮುನಿರಾಜು, ಮಂಗಲ ಉಮೇಶ್ ಬಸವರಾಜು, ನಾಗೇಂದ್ರ, ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT