ನಗರದ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಶನಿವಾರ ಬೆಳ್ಳಿಹಬ್ಬದ ದತ್ತಿ ಉಪನ್ಯಾಸ ನೀಡಿದ ಅವರು, ‘ಎಷ್ಟೋ ವಿಚಾರಾಣಾಧೀನ ಕೈದಿಗಳನ್ನು 10–15 ವರ್ಷ ವಿಚಾರಣೆಗೆ ಒಳಪಡಿಸಲಾಗುತ್ತದೆ. ಆ ಸಂದರ್ಭದಲ್ಲಿ ಆರೋಪಿ ಜೈಲಿನಲ್ಲಿ ಕಳೆಯಬೇಕಾಗುತ್ತದೆ. ಈ ಪೈಕಿ ಶೇ 90ರಷ್ಟು ಮಂದಿಯನ್ನು ನಿರಪರಾಧಿ ಎಂದು ಬಿಡುಗಡೆ ಮಾಡಲಾಗುತ್ತದೆ. ಅಷ್ಟರಲ್ಲಿ ಅವರ ಆಯುಸ್ಸು, ಸಂಪತ್ತು ಎಲ್ಲವೂ ಕರಗಿಹೋಗಿರುತ್ತದೆ’ ಎಂದು ಹೇಳಿದರು.