ಸುಬ್ರಹ್ಮಣ್ಯ: ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ನದಿ ಬಳಿ ಸೋಮವಾರ ಪತ್ತೆಯಾಗಿದೆ. ಶವ ಕೊಳೆತ ಸ್ಥಿತಿಯಲ್ಲಿದೆ. ಮೃತ ವ್ಯಕ್ತಿಯ ಶರ್ಟ್ನ ಟೈಲರ್ ಮಾರ್ಕ್ನಿಂದ, ಇವರು ಕೇರಳದ ಬಿಂಬಗಲ್ ಬೇಡಡಕ್ಕ ಗ್ರಾಮದ ಅಮ್ಮಂಗೋಡ್ ಅಚ್ಚುತ್ತನ್ ಎಂದು ಗುರುತಿಸಲಾಗಿದೆ. ಇವರು ಜನವರಿ 27ರಂದು ನಾಪತ್ತೆಯಾಗಿರುವ ಬಗ್ಗೆ ಕಾಸರಗೋಡಿನ ಬೇಡಗಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನಾ ಸ್ಥಳಕ್ಕೆ ಕೇರಳ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಸುಳ್ಯ ವೃತ್ತ ನಿರೀಕ್ಷಕ ರವೀಂದ್ರ ಸಿ.ಎಂ ಹಾಗೂ ಸುಬ್ರಹ್ಮಣ್ಯ ಎಸ್ಐ ಮಂಜುನಾಥ್ ಇದ್ದರು.