ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಯು.ಟಿ.ಖಾದರ್, ‘ಪಿಪಿಇ ಕಿಟ್ ಧರಿಸಿದ್ದ ಸಿಬ್ಬಂದಿ ಪ್ಲಾಸ್ಟಿಕ್ ಹೊದಿಕೆಯನ್ನು ಸ್ವಲ್ಪ ತೆರೆದಿದ್ದು, ಇತರರು ಯಾರೂ ಸ್ಪರ್ಶಿಸಿಲ್ಲ. ಆದರೆ, ಕೋವಿಡ್ ಸೋಂಕಿನಿಂದ ಮೃತಪಟ್ಟವರ ಶವದ ಮುಖವನ್ನು ಕುಟುಂಬದವರು ಅಂತಿಮವಾಗಿ ನೋಡುವ ಸಲುವಾಗಿ ಮುಖಕ್ಕೆ ಪಾರದರ್ಶಕ ಹೊದಿಕೆ ಬಳಸಿದರೆ ಉತ್ತಮ’ ಎಂದು ಅಭಿಪ್ರಾಯಪಟ್ಟರು.