ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಉರೂಸ್ ಪ್ರಯುಕ್ತ ಸಾದಾತ್, ಉಲೇಮಾ ಹಾಗೂ ಸೂಫಿವರ್ಯರಿಂದ ಧಾರ್ಮಿಕ ಉಪನ್ಯಾಸ ಮತ್ತು ಪಾರ್ಥನೆಗಳು ಜರುಗಲಿವೆ. ಇದೇ 18ರಂದು ರಾತ್ರಿ 7ರಿಂದ ಉಳ್ಳಾಲದ ಸಂಯುಕ್ತ ಖಾಝಿ ಅಸಯ್ಯದ್ ಫಝಲ್ ಕೋಯಮ್ಮ ತಂಙಳ್, ಕೂರತ್ ಅವರ ಪ್ರಾರ್ಥನೆಯೊಂದಿಗೆ ಉರೂಸ್ ಉದ್ಘಾಟನೆಗೊಳ್ಳಲಿದೆ. ಇಸ್ಮಾಯಿಲ್ ಕೊಪ್ಪಳ ಅಧ್ಯಕ್ಷತೆ ವಹಿಸಲಿದ್ದಾರೆ. ಬಹು ಖಾಝಿ ಝೈನುಲ್ ಉಲೇಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಎಂ.ಪಿ ಇಬ್ರಾಹಿಂ ಫೈಝಿ ಮುಸೈನ್ ಸರದಿ ಕೆ.ಸಿ ರೋಡ್ ಭಾಗವಹಿಸುವರು’ ಎಂದರು.