<p>ಉಳ್ಳಾಲ: ಬಕ್ರೀದ್ ಹಬ್ಬವು ತ್ಯಾಗ–ಬಲಿದಾನದ ಹಬ್ಬವಾಗಿದ್ದು, ಪ್ರತಿ ಹಬ್ಬವೂ ಪ್ರೀತಿ, ವಿಶ್ವಾಸ, ಸಹೋದರತೆಯನ್ನು ನೆನಪಿಸುತ್ತದೆ ಎಂದು ವಿಧಾನ ಸಭೆಯ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.</p>.<p>ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳಾಲ ದರ್ಗಾದಲ್ಲಿ ಝಿಯಾರತ್ ಮಾಡಿ ಬಳಿಕ ಮಾಧ್ಯಮ ಜೊತೆ ಅವರು ಮಾತನಾಡಿದರು.</p>.<p>ಬಕ್ರೀದ್ ಪ್ರೀತಿ, ಪರೋಪಕಾರಿ ಮನೋಭಾವದ ಹಬ್ಬವಾಗಿದ್ದು, ನಮ್ಮ ಊರಲ್ಲಿ ಶಾಂತಿ ದಯಪಾಲಿಸಬೇಕು. ಶಾಂತಿ- ಸೌಹಾರ್ದದ ಜತೆ ನೆಮ್ಮದಿಯ ಲ್ಲಿ ಬದುಕಬೇಕು. ಊರಲ್ಲಿ ನಿರ್ಭಯದಿಂದ ಜೀವಿಸಬೇಕು ಎಂಬುದೇ ನನ್ನ ಪ್ರಾರ್ಥನೆ ಎಂದರು.</p>.<p>ಉಪಾಧ್ಯಕ್ಷ ಅಶ್ರಫ್ ರೈಟ್ ವೇ ಮಾತನಾಡಿ, ತ್ಯಾಗ ಬಲಿದಾನದ ಹಬ್ಬ ಆಗಿರುವ ಬಕ್ರೀದ್ ಸೌಹಾರ್ದ, ಸಹೋದತೆಯ ಬೀಡಾಗಬೇಕು. ಶಾಂತಿಯನ್ನು ಸಾರುವ ಇಸ್ಲಾಮ್ ಏಕತೆಯನ್ನು ಬಯಸುತ್ತದೆ. ಹಜ್ ಯಾತ್ರೆಗೆ ತೆರಳಿರುವ ಯಾತ್ರಾರ್ಥಿಗಳು ಸಂತೋಷದಿಂದ ಹಜ್ ಕರ್ಮ ನಿರ್ವಹಿಸಿ ಬರಲಿ ಎಂದು ಹೇಳಿದರು.</p>.<p>ಹಾಫಿಳ್ ಅಬ್ದುಲ್ ಮಜೀದ್ ಫಾಳ್ ಲಿ ಪೆರ್ನಾಲ್ ನಮಾಝ್ ಹಾಗೂ ಜುಮಾ ಕುತುಬಾ ನೆರವೇರಿಸಿದರು.</p>.<p>ಕೋಶಾಧಿಕಾರಿ ನಾಝಿಮ್ ರಹ್ಮಾನ್, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಶ್ರಫ್ ಕೋಡಿ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-29-1318020832</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಳ್ಳಾಲ: ಬಕ್ರೀದ್ ಹಬ್ಬವು ತ್ಯಾಗ–ಬಲಿದಾನದ ಹಬ್ಬವಾಗಿದ್ದು, ಪ್ರತಿ ಹಬ್ಬವೂ ಪ್ರೀತಿ, ವಿಶ್ವಾಸ, ಸಹೋದರತೆಯನ್ನು ನೆನಪಿಸುತ್ತದೆ ಎಂದು ವಿಧಾನ ಸಭೆಯ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.</p>.<p>ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳಾಲ ದರ್ಗಾದಲ್ಲಿ ಝಿಯಾರತ್ ಮಾಡಿ ಬಳಿಕ ಮಾಧ್ಯಮ ಜೊತೆ ಅವರು ಮಾತನಾಡಿದರು.</p>.<p>ಬಕ್ರೀದ್ ಪ್ರೀತಿ, ಪರೋಪಕಾರಿ ಮನೋಭಾವದ ಹಬ್ಬವಾಗಿದ್ದು, ನಮ್ಮ ಊರಲ್ಲಿ ಶಾಂತಿ ದಯಪಾಲಿಸಬೇಕು. ಶಾಂತಿ- ಸೌಹಾರ್ದದ ಜತೆ ನೆಮ್ಮದಿಯ ಲ್ಲಿ ಬದುಕಬೇಕು. ಊರಲ್ಲಿ ನಿರ್ಭಯದಿಂದ ಜೀವಿಸಬೇಕು ಎಂಬುದೇ ನನ್ನ ಪ್ರಾರ್ಥನೆ ಎಂದರು.</p>.<p>ಉಪಾಧ್ಯಕ್ಷ ಅಶ್ರಫ್ ರೈಟ್ ವೇ ಮಾತನಾಡಿ, ತ್ಯಾಗ ಬಲಿದಾನದ ಹಬ್ಬ ಆಗಿರುವ ಬಕ್ರೀದ್ ಸೌಹಾರ್ದ, ಸಹೋದತೆಯ ಬೀಡಾಗಬೇಕು. ಶಾಂತಿಯನ್ನು ಸಾರುವ ಇಸ್ಲಾಮ್ ಏಕತೆಯನ್ನು ಬಯಸುತ್ತದೆ. ಹಜ್ ಯಾತ್ರೆಗೆ ತೆರಳಿರುವ ಯಾತ್ರಾರ್ಥಿಗಳು ಸಂತೋಷದಿಂದ ಹಜ್ ಕರ್ಮ ನಿರ್ವಹಿಸಿ ಬರಲಿ ಎಂದು ಹೇಳಿದರು.</p>.<p>ಹಾಫಿಳ್ ಅಬ್ದುಲ್ ಮಜೀದ್ ಫಾಳ್ ಲಿ ಪೆರ್ನಾಲ್ ನಮಾಝ್ ಹಾಗೂ ಜುಮಾ ಕುತುಬಾ ನೆರವೇರಿಸಿದರು.</p>.<p>ಕೋಶಾಧಿಕಾರಿ ನಾಝಿಮ್ ರಹ್ಮಾನ್, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಶ್ರಫ್ ಕೋಡಿ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-29-1318020832</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>