<p><strong>ಪುತ್ತೂರು:</strong> ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಸುರುಳಿಮೂಲೆಯಲ್ಲಿ ನಿರ್ಮಿಸಿರುವ ಅನಧಿಕೃತ ಕಟ್ಟಡಗಳನ್ನು ಶನಿವಾರ ತೆರವುಗೊಳಿಸಲಾಯಿತು. ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.</p>.<p>ಸಾರ್ವಜನಿಕ ಸರ್ಕಾರಿ ಉದ್ದೇಶಗಳಿಗಾಗಿ ಗ್ರಾಮ ಪಂಚಾಯಿತಿ ಕಾಯ್ದಿರಿಸಿದ ಸರ್ಕಾರಿ ಜಾಗದ ಅತಿಕ್ರಮಣ ತೆರವುಗೊಳಿಸದ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಓಣಿಯಡ್ಕ ಮಸೀದಿ ಪಕ್ಕದ ಖಾಲಿ ಜಾಗದಲ್ಲಿ ಟರ್ಪಾಲ್ ಹೊದಿಕೆಯ ಜೋಪಡಿ ನಿರ್ಮಿಸಿದ್ದ ಬಗ್ಗೆ ಮಸೀದಿ ಕಮಿಟಿಯವರು, ಆ ಸ್ಥಳ ಮಸೀದಿಯ ದಫನ ಭೂಮಿ ಎಂದು ವಾದಕ್ಕಿಳಿದು ದೂರು ನೀಡಿದ್ದರು. </p>.<p>ಶನಿವಾರ ನಡೆದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸುರುಳಿಮೂಲೆಯ ಸ್ಥಳದ ಅತಿಕ್ರಮಣದ ಬಗ್ಗೆ ಚರ್ಚೆ ನಡೆಯಿತು. ಸರ್ಕರಿ ಜಾಗದಲ್ಲಿ ನಡೆದ ಅತಿಕ್ರಮಣ ತೆರವುಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಈ ನಡುವೆ ಸಭೆ ನಡೆಯುತ್ತಿದ್ದ ವೇಳೆ ತಹಶೀಲ್ದಾರ್ ಪುರಂದರ ಹೆಗ್ಡೆ ಹಾಗೂ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ಸುರುಳಿಮೂಲೆಯಲ್ಲಿ ಸರ್ಕಾರಿ ಸ್ಥಳದ ಸರ್ವೆ ಕಾರ್ಯ ಆರಂಭಿಸಿದರು. ಸಂಪ್ಯ ಠಾಣೆ ಪೊಲೀಸರು ಬಂದೋಬಸ್ತ್ ಮಾಡಿದ್ದರು.</p>.<p>ಸರ್ಕಾರಿ ಜಾಗದ ಅಳತೆ ನಡೆಸಿದ ಅಧಿಕಾರಿಗಳು, ಮೆಸ್ಕಾಂ ಸಬ್ ಸ್ಟೇಷನ್ ನಿರ್ಮಾಣ, ಅಂಗನವಾಡಿ ಕೇಂದ್ರ ಮೊದಲಾದ ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ್ದ ಜಾಗದಲ್ಲಿ ಅಬ್ದುಲ್ ರಹೀಂ ಎಂಬುವರು ಅನಧಿಕೃತವಾಗಿ ನಿರ್ಮಿಸಿದ್ದ ಎರಡು ಕೊಠಡಿಯ ಕೆಂಪು ಕಲ್ಲಿನ ಗೋಡೆಯ ಶೀಟ್ ಅಳವಡಿಸಿದ ಅಂಗಡಿ ಕಟ್ಟಡ, ಶಶಿಧರ ಪೂಜಾರಿ ಎಂಬುವರು ನಿರ್ಮಿಸಿದ್ದ ಕಲ್ಲಿನ ಗೋಡೆಯ ಶೀಟ್ ಅಳವಡಿಸಿದ್ದ ಸಣ್ಣ ಮನೆ ಕಟ್ಟಡವನ್ನು ಬೆಸಿಬಿ ಮೂಲಕ ತೆರವುಗೊಳಿಸಿದರು. ಮಸೀದಿಯ ದಫನಭೂಮಿ ಜಾಗ ಎಂಬ ವಿವಾದಿತ ಸ್ಥಳದಲ್ಲಿದ್ದ ಜೋಪಡಿಯ ತೆರವು ಕಾರ್ಯವೂ ನಡೆಯಿತು. ಕಟ್ಟಡಗಳಿಗೆ ಬಳಸಿದ್ದ ಶೀಟ್, ಕಲ್ಲು ಹಾಗೂ ಇನ್ನಿತರ ವಸ್ತುಗಳನ್ನು ಸಂಬಂಧಪಟ್ಟವರು ತೆಗೆದುಕೊಂಡು ಹೋಗುವಂತೆ ಸೂಚಿಸಲಾಯಿತು.</p>.<p>ಸರ್ವೇಯರ್ ಮೋಹನ್, ಕಂದಾಯ ನಿರೀಕ್ಷಕ ಗೋಪಾಲ್, ಗ್ರಾಮ ಆಡಳಿತಾಧಿಕಾರಿ ಮಂಜುನಾಥ ಲಮಾಣಿ ಪಾಲ್ಗೊಂಡಿದ್ದರು.</p>.<p>ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಈ ಅತಿಕ್ರಮಣಗಳ ತೆರವು ಕಾರ್ಯಾಚರಣೆ ನಡೆಯಿತು. ರೈತ ಸಂಘ ಹಾಗೂ ಹಿಂದೂ ಸಂಘಟನೆಗಳ ಪ್ರಮುಖರು, ಮಸೀದಿ ಕಮಿಟಿಯವರು ಹಾಗೂ ಸ್ಥಳೀಯರು ಹಾಜರಿದ್ದರು.</p>.<p>ಜೋಪಡಿ ಇದ್ದುದು ದಫನ ಭೂಮಿಯಲ್ಲಿ ಅಲ್ಲ: ಮಸೀದಿಗೆ ಸೇರಿದ ದಫನಭೂಮಿ ಜಾಗದಲ್ಲಿ ಟರ್ಪಾಲ್ ಹೊದಿಕೆಯ ಜೋಪಡಿ ನಿರ್ಮಿಸಿದ್ದಾರೆ ಎಂಬ ಮಸೀದಿ ಕಮಿಟಿಯವರ ವಾದ- ಆಕ್ಷೇಪವು ವಿವಾದ ಮತ್ತು ಗೊಂದಲ ಸೃಷ್ಟಿಗೆ ಕಾರಣವಾಗಿತ್ತು. ಆದರೆ, ಶನಿವಾರ ನಡೆದ ಸರ್ವೆ ವೇಳೆ ಆ ಸ್ಥಳವು ಸರ್ಕಾರಿ ಭೂಮಿ ಎಂಬುವುದು ಖಚಿತಗೊಂಡಿತು. ಮಸೀದಿಗೆ ಸೇರಿದ 15 ಸೆಂಟ್ಸ್ ದಫನ ಭೂಮಿ ಜಾಗ ಮಸೀದಿಯ ಹಿಂಭಾಗದಲ್ಲಿದೆ ಎಂಬ ನಿರ್ಧಾರಕ್ಕೆ ಬರಲಾಯಿತು. ದಫನ ಭೂಮಿಯ ಸರ್ವೆ, ಗಡಿಗುರುತಿಗಾಗಿ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಮಸೀದಿ ಕಮಿಟಿಯವರಿಗೆ ಸೂಚಿಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುತ್ತೂರು:</strong> ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಸುರುಳಿಮೂಲೆಯಲ್ಲಿ ನಿರ್ಮಿಸಿರುವ ಅನಧಿಕೃತ ಕಟ್ಟಡಗಳನ್ನು ಶನಿವಾರ ತೆರವುಗೊಳಿಸಲಾಯಿತು. ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.</p>.<p>ಸಾರ್ವಜನಿಕ ಸರ್ಕಾರಿ ಉದ್ದೇಶಗಳಿಗಾಗಿ ಗ್ರಾಮ ಪಂಚಾಯಿತಿ ಕಾಯ್ದಿರಿಸಿದ ಸರ್ಕಾರಿ ಜಾಗದ ಅತಿಕ್ರಮಣ ತೆರವುಗೊಳಿಸದ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಓಣಿಯಡ್ಕ ಮಸೀದಿ ಪಕ್ಕದ ಖಾಲಿ ಜಾಗದಲ್ಲಿ ಟರ್ಪಾಲ್ ಹೊದಿಕೆಯ ಜೋಪಡಿ ನಿರ್ಮಿಸಿದ್ದ ಬಗ್ಗೆ ಮಸೀದಿ ಕಮಿಟಿಯವರು, ಆ ಸ್ಥಳ ಮಸೀದಿಯ ದಫನ ಭೂಮಿ ಎಂದು ವಾದಕ್ಕಿಳಿದು ದೂರು ನೀಡಿದ್ದರು. </p>.<p>ಶನಿವಾರ ನಡೆದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸುರುಳಿಮೂಲೆಯ ಸ್ಥಳದ ಅತಿಕ್ರಮಣದ ಬಗ್ಗೆ ಚರ್ಚೆ ನಡೆಯಿತು. ಸರ್ಕರಿ ಜಾಗದಲ್ಲಿ ನಡೆದ ಅತಿಕ್ರಮಣ ತೆರವುಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಈ ನಡುವೆ ಸಭೆ ನಡೆಯುತ್ತಿದ್ದ ವೇಳೆ ತಹಶೀಲ್ದಾರ್ ಪುರಂದರ ಹೆಗ್ಡೆ ಹಾಗೂ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ಸುರುಳಿಮೂಲೆಯಲ್ಲಿ ಸರ್ಕಾರಿ ಸ್ಥಳದ ಸರ್ವೆ ಕಾರ್ಯ ಆರಂಭಿಸಿದರು. ಸಂಪ್ಯ ಠಾಣೆ ಪೊಲೀಸರು ಬಂದೋಬಸ್ತ್ ಮಾಡಿದ್ದರು.</p>.<p>ಸರ್ಕಾರಿ ಜಾಗದ ಅಳತೆ ನಡೆಸಿದ ಅಧಿಕಾರಿಗಳು, ಮೆಸ್ಕಾಂ ಸಬ್ ಸ್ಟೇಷನ್ ನಿರ್ಮಾಣ, ಅಂಗನವಾಡಿ ಕೇಂದ್ರ ಮೊದಲಾದ ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ್ದ ಜಾಗದಲ್ಲಿ ಅಬ್ದುಲ್ ರಹೀಂ ಎಂಬುವರು ಅನಧಿಕೃತವಾಗಿ ನಿರ್ಮಿಸಿದ್ದ ಎರಡು ಕೊಠಡಿಯ ಕೆಂಪು ಕಲ್ಲಿನ ಗೋಡೆಯ ಶೀಟ್ ಅಳವಡಿಸಿದ ಅಂಗಡಿ ಕಟ್ಟಡ, ಶಶಿಧರ ಪೂಜಾರಿ ಎಂಬುವರು ನಿರ್ಮಿಸಿದ್ದ ಕಲ್ಲಿನ ಗೋಡೆಯ ಶೀಟ್ ಅಳವಡಿಸಿದ್ದ ಸಣ್ಣ ಮನೆ ಕಟ್ಟಡವನ್ನು ಬೆಸಿಬಿ ಮೂಲಕ ತೆರವುಗೊಳಿಸಿದರು. ಮಸೀದಿಯ ದಫನಭೂಮಿ ಜಾಗ ಎಂಬ ವಿವಾದಿತ ಸ್ಥಳದಲ್ಲಿದ್ದ ಜೋಪಡಿಯ ತೆರವು ಕಾರ್ಯವೂ ನಡೆಯಿತು. ಕಟ್ಟಡಗಳಿಗೆ ಬಳಸಿದ್ದ ಶೀಟ್, ಕಲ್ಲು ಹಾಗೂ ಇನ್ನಿತರ ವಸ್ತುಗಳನ್ನು ಸಂಬಂಧಪಟ್ಟವರು ತೆಗೆದುಕೊಂಡು ಹೋಗುವಂತೆ ಸೂಚಿಸಲಾಯಿತು.</p>.<p>ಸರ್ವೇಯರ್ ಮೋಹನ್, ಕಂದಾಯ ನಿರೀಕ್ಷಕ ಗೋಪಾಲ್, ಗ್ರಾಮ ಆಡಳಿತಾಧಿಕಾರಿ ಮಂಜುನಾಥ ಲಮಾಣಿ ಪಾಲ್ಗೊಂಡಿದ್ದರು.</p>.<p>ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಈ ಅತಿಕ್ರಮಣಗಳ ತೆರವು ಕಾರ್ಯಾಚರಣೆ ನಡೆಯಿತು. ರೈತ ಸಂಘ ಹಾಗೂ ಹಿಂದೂ ಸಂಘಟನೆಗಳ ಪ್ರಮುಖರು, ಮಸೀದಿ ಕಮಿಟಿಯವರು ಹಾಗೂ ಸ್ಥಳೀಯರು ಹಾಜರಿದ್ದರು.</p>.<p>ಜೋಪಡಿ ಇದ್ದುದು ದಫನ ಭೂಮಿಯಲ್ಲಿ ಅಲ್ಲ: ಮಸೀದಿಗೆ ಸೇರಿದ ದಫನಭೂಮಿ ಜಾಗದಲ್ಲಿ ಟರ್ಪಾಲ್ ಹೊದಿಕೆಯ ಜೋಪಡಿ ನಿರ್ಮಿಸಿದ್ದಾರೆ ಎಂಬ ಮಸೀದಿ ಕಮಿಟಿಯವರ ವಾದ- ಆಕ್ಷೇಪವು ವಿವಾದ ಮತ್ತು ಗೊಂದಲ ಸೃಷ್ಟಿಗೆ ಕಾರಣವಾಗಿತ್ತು. ಆದರೆ, ಶನಿವಾರ ನಡೆದ ಸರ್ವೆ ವೇಳೆ ಆ ಸ್ಥಳವು ಸರ್ಕಾರಿ ಭೂಮಿ ಎಂಬುವುದು ಖಚಿತಗೊಂಡಿತು. ಮಸೀದಿಗೆ ಸೇರಿದ 15 ಸೆಂಟ್ಸ್ ದಫನ ಭೂಮಿ ಜಾಗ ಮಸೀದಿಯ ಹಿಂಭಾಗದಲ್ಲಿದೆ ಎಂಬ ನಿರ್ಧಾರಕ್ಕೆ ಬರಲಾಯಿತು. ದಫನ ಭೂಮಿಯ ಸರ್ವೆ, ಗಡಿಗುರುತಿಗಾಗಿ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಮಸೀದಿ ಕಮಿಟಿಯವರಿಗೆ ಸೂಚಿಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>