ಕಾರ್ಯಾಚರಣೆ ಆರಂಭಿಸಿದ ಇಲಾಖೆ ಪೇರಡ್ಕದಿಂದ ಸಾಕಾನೆ ತಂಡಗಳನ್ನು ಐತ್ತೂರಿಗೆ ಕರೆತಂದು ಕಾರ್ಯಚರಣೆ ಆರಂಭಿಸಲಾಯಿತು. ಎರಡು ಕಾಡಾನೆ ಇರುವುದು ಕಂಡುಬಂದಿದೆ. ಗುರಿ ತಪ್ಪಿದ ಮದ್ದುಗುಂಡು: ಸಂಜೆ ವೇಳೆ ಕಾರ್ಯಚರಣೆ ತಂಡದವರು ಕಾಡಾನೆ ಮೇಲೆ ಮದ್ದು ಗುಂಡು ಪ್ರಯೋಗ ಮಾಡಿದ್ದು ಅದು ಗುರಿ ತಪ್ಪಿದೆ, ಬಳಿಕ 2ನೇ ಬಾರಿಯೂ ಮದ್ದು ಗುಂಡು ಗುರಿ ತಪ್ಪಿದೆ. ಈ ಮಧ್ಯೆ ಕಾಡಾನೆ ಕಾರ್ಯಾಚರಣೆ ತಂಡದ ಸಿಬ್ಬಂದಿಗಳ ಮೇಲೆ ದಾಳಿಗೆ ಮುಂದಾದ ಘಟನೆಯೂ ನಡೆದಿದ್ದು, ಆ ಬಳಿಕ ಬುಧವಾರದ ಕಾರ್ಯಚರಣೆ ಸ್ಥಗಿತ ಮಾಡಿ ಸಾಕಾನೆಗಳನ್ನು ಪೇರಡ್ಕದ ಶಿಬಿರಕ್ಕೆ ಕರೆತರಲಾಯಿತು.