<p>ಉಪ್ಪಿನಂಗಡಿ: ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಯೋಜನೆಗಾಗಿ ₹ 1.99 ಕೋಟಿ ಅನುದಾನ ಮಂಜೂರಾಗಿ ಅನುಮೋದನೆ ದೊರೆತಿದ್ದು, ದೇವಾಲಯದಲ್ಲಿನ ನೇತ್ರಾವತಿ ಸಮುದಾಯ ಭವನದ ಮೇಲಿನ ಮಹಡಿಯಲ್ಲಿ ಸಭಾ ಭವನವನ್ನು ನಿರ್ಮಿಸೊಲು ಯೋಜನೆ ರೂಪಿಸಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಯಕ್ ತಿಳಿಸಿದರು.</p>.<p>ದೇವಳದಲ್ಲಿ ಅವರ 2 ವರ್ಷದ ಆಡಳಿತಾವಧಿಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯದಲ್ಲಿದ್ದ ಹಳೆಯ ಕಟ್ಟಡಗಳ ದುರಸ್ತಿ ಕಾಮಗಾರಿ, ಮೂಲಭೂತ ಅವಶ್ಯಕತೆಗಳ ನಿರ್ಮಾಣ, ದೈವಗಳ ಗುಡಿ ಪುನರ್ ನಿರ್ಮಾಣ, ದೇವಳದ ಮುಂಭಾಗದಲ್ಲಿನ 32 ಸೆಂಟ್ಸ್ ಭೂಮಿಯನ್ನು ₹ 1.51 ಕೋಟಿಗೆ ಖರೀದಿ ಮಾಡಿರುವುದು, ದೇವಳದ ಹಕ್ಕಿನ 29 ಸೆಂಟ್ಸ್ ಭೂಮಿಯನ್ನು ಅದರ ಅನುಭೋಗದಾರರು ಸ್ವಯಂ ಪ್ರೇರಣೆಯಿಂದ ದೇವಳಕ್ಕೆ ಹಿಂತಿರುಗಿಸುವಂತೆ ಮಾಡಿರುವುದು, ದೇವಳದ ಸುತ್ತಮುತ್ತಲು ಇಂಟರ್ ಲಾಕ್ ಅಳವಡಿಸಲಾಗಿದೆ ಎಂದರು.</p>.<p>2027ರಲ್ಲಿ ಬ್ರಹ್ಮಕಲಶ: ಸಹಸ್ರಲಿಂಗೇಶ್ವರ ದೇವಾಲಯದಲ್ಲಿ 2027ರಲ್ಲಿ ನಡೆಯಬೇಕಾಗಿರುವ ಬ್ರಹ್ಮಕಲಶೋತ್ಸವವನ್ನು ಶಾಸಕರ ಪ್ರಯತ್ನದ ಫಲವಾಗಿ ದೊರಕಲಿರುವ ₹ 352 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಬಳಿಕವೇ ನಡೆಸಲು ಸಂಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.</p>.<p>ಅಣೆಕಟ್ಟೆಯ ಹಿನ್ನೀರಿನಿಂದಾಗಿ ಉದ್ಭವಲಿಂಗಕ್ಕೆ ಈ ಬಾರಿಯೂ ಪೂಜೆ ಸಲ್ಲಿಸಲು ಆಗದೆ ಇರುವುದು ಬೇಸರ ಉಂಟುಮಾಡಿದೆ. ಈ ಭಾಗದ ರೈತರ ಹಿತದೃಷ್ಟಿ ಮತ್ತು ಜನರ ಕುಡಿಯುವ ನೀರಿನ ಸಂಗ್ರಹಕ್ಕಾಗಿ ಮಾಡಲಾದ ವ್ಯವಸ್ಥೆಯನ್ನು ಗೌರವಿಸಿ ಈ ನ್ಯೂನತೆ ಒಪ್ಪಿಕೊಳ್ಳಲಾಗಿದೆ. ನೀರಕಟ್ಟೆ ಅಣೆಕಟ್ಟೆಯಲ್ಲಿ ಜಲವಿದ್ಯುತ್ ಸ್ಥಾವರ ಕಾರ್ಯಾರಂಭಗೊಂಡೆ ಹಾಗೂ ಮುಗೇರಡ್ಕದ ಅಣೆಕಟ್ಟೆಯಲ್ಲೂ ನೀರು ಸಂಗ್ರಹಿಸಿದರೆ ಬಿಳಿಯೂರು ಅಣೆಕಟ್ಟೆಗೆ ಜಾತ್ರೆ ಮುಗಿಯುವವರೆಗೆ ಗೇಟು ಅಳವಡಿಸದೆ ಇರುವ ಬಗ್ಗೆ ಸಂಬಂಧಿತ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.</p>.<p>ನದಿಗೆ ಶೌಚಾಲಯದ ತ್ಯಾಜ್ಯ ಸೇರ್ಪಡೆ ಅಮಾನುಷ: ನದಿಗೆ ಶೌಚಾಲಯದ ನೀರನ್ನು ಹರಿಯಬಿಡುತ್ತಿರುವುದು ಅಮಾನುಷ ನಡೆಯಾಗಿದೆ. ಇದರ ಬಗ್ಗೆ ಸಂಬಂಧಿತ ಆಡಳಿತಾಧಿಕಾರಿಗಳು ಗಮನ ಹರಿಸಬೇಕು ಎಂದರು.</p>.<p>ಈ ಬಾರಿಯ ಜಾತ್ರೋತ್ಸವ ಕಾರ್ಯಕ್ರಮ ಚೆನ್ನಾಗಿ ನಡೆದಿದೆ. ಕ್ಷೇತ್ರದ ಶಾಸಕರ ಆಶೋತ್ತರದಂತೆ ಅಳವಡಿಸಲಾದ ವಿದ್ಯುತ್ ದೀಪವನ್ನು ಪಿಡಿಒ ಕತ್ತರಿಸಿದ್ದು, ಹಾಗೂ ಶಾಸಕರ ಸೂಚನೆಯಂತೆ ನಿರುಪಯುಕ್ತವಾಗಿದ್ದ ಕುಡಿಯುವ ನೀರಿನ ಘಟಕವನ್ನು ದೇವಳದ ವೆಚ್ಚದಲ್ಲಿ ತೆರವು ಮಾಡಿರುವುದಕ್ಕೆ ನೋಟಿಸ್ ಜಾರಿ ಮಾಡಿರುವುದು ಬೇಸರ ತಂದಿದೆ ಎಂದರು.</p>.<p>ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೆಂಕಪ್ಪ ಪೂಜಾರಿ ಮರುವೇಲು, ಡಾ.ರಮ್ಯ ರಾಜಾರಾಮ್, ಸೋಮನಾಥ, ಗೋಪಾಲಕೃಷ್ಣ ರೈ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260328-29-1315564880</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಪ್ಪಿನಂಗಡಿ: ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಯೋಜನೆಗಾಗಿ ₹ 1.99 ಕೋಟಿ ಅನುದಾನ ಮಂಜೂರಾಗಿ ಅನುಮೋದನೆ ದೊರೆತಿದ್ದು, ದೇವಾಲಯದಲ್ಲಿನ ನೇತ್ರಾವತಿ ಸಮುದಾಯ ಭವನದ ಮೇಲಿನ ಮಹಡಿಯಲ್ಲಿ ಸಭಾ ಭವನವನ್ನು ನಿರ್ಮಿಸೊಲು ಯೋಜನೆ ರೂಪಿಸಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಯಕ್ ತಿಳಿಸಿದರು.</p>.<p>ದೇವಳದಲ್ಲಿ ಅವರ 2 ವರ್ಷದ ಆಡಳಿತಾವಧಿಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯದಲ್ಲಿದ್ದ ಹಳೆಯ ಕಟ್ಟಡಗಳ ದುರಸ್ತಿ ಕಾಮಗಾರಿ, ಮೂಲಭೂತ ಅವಶ್ಯಕತೆಗಳ ನಿರ್ಮಾಣ, ದೈವಗಳ ಗುಡಿ ಪುನರ್ ನಿರ್ಮಾಣ, ದೇವಳದ ಮುಂಭಾಗದಲ್ಲಿನ 32 ಸೆಂಟ್ಸ್ ಭೂಮಿಯನ್ನು ₹ 1.51 ಕೋಟಿಗೆ ಖರೀದಿ ಮಾಡಿರುವುದು, ದೇವಳದ ಹಕ್ಕಿನ 29 ಸೆಂಟ್ಸ್ ಭೂಮಿಯನ್ನು ಅದರ ಅನುಭೋಗದಾರರು ಸ್ವಯಂ ಪ್ರೇರಣೆಯಿಂದ ದೇವಳಕ್ಕೆ ಹಿಂತಿರುಗಿಸುವಂತೆ ಮಾಡಿರುವುದು, ದೇವಳದ ಸುತ್ತಮುತ್ತಲು ಇಂಟರ್ ಲಾಕ್ ಅಳವಡಿಸಲಾಗಿದೆ ಎಂದರು.</p>.<p>2027ರಲ್ಲಿ ಬ್ರಹ್ಮಕಲಶ: ಸಹಸ್ರಲಿಂಗೇಶ್ವರ ದೇವಾಲಯದಲ್ಲಿ 2027ರಲ್ಲಿ ನಡೆಯಬೇಕಾಗಿರುವ ಬ್ರಹ್ಮಕಲಶೋತ್ಸವವನ್ನು ಶಾಸಕರ ಪ್ರಯತ್ನದ ಫಲವಾಗಿ ದೊರಕಲಿರುವ ₹ 352 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಬಳಿಕವೇ ನಡೆಸಲು ಸಂಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.</p>.<p>ಅಣೆಕಟ್ಟೆಯ ಹಿನ್ನೀರಿನಿಂದಾಗಿ ಉದ್ಭವಲಿಂಗಕ್ಕೆ ಈ ಬಾರಿಯೂ ಪೂಜೆ ಸಲ್ಲಿಸಲು ಆಗದೆ ಇರುವುದು ಬೇಸರ ಉಂಟುಮಾಡಿದೆ. ಈ ಭಾಗದ ರೈತರ ಹಿತದೃಷ್ಟಿ ಮತ್ತು ಜನರ ಕುಡಿಯುವ ನೀರಿನ ಸಂಗ್ರಹಕ್ಕಾಗಿ ಮಾಡಲಾದ ವ್ಯವಸ್ಥೆಯನ್ನು ಗೌರವಿಸಿ ಈ ನ್ಯೂನತೆ ಒಪ್ಪಿಕೊಳ್ಳಲಾಗಿದೆ. ನೀರಕಟ್ಟೆ ಅಣೆಕಟ್ಟೆಯಲ್ಲಿ ಜಲವಿದ್ಯುತ್ ಸ್ಥಾವರ ಕಾರ್ಯಾರಂಭಗೊಂಡೆ ಹಾಗೂ ಮುಗೇರಡ್ಕದ ಅಣೆಕಟ್ಟೆಯಲ್ಲೂ ನೀರು ಸಂಗ್ರಹಿಸಿದರೆ ಬಿಳಿಯೂರು ಅಣೆಕಟ್ಟೆಗೆ ಜಾತ್ರೆ ಮುಗಿಯುವವರೆಗೆ ಗೇಟು ಅಳವಡಿಸದೆ ಇರುವ ಬಗ್ಗೆ ಸಂಬಂಧಿತ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.</p>.<p>ನದಿಗೆ ಶೌಚಾಲಯದ ತ್ಯಾಜ್ಯ ಸೇರ್ಪಡೆ ಅಮಾನುಷ: ನದಿಗೆ ಶೌಚಾಲಯದ ನೀರನ್ನು ಹರಿಯಬಿಡುತ್ತಿರುವುದು ಅಮಾನುಷ ನಡೆಯಾಗಿದೆ. ಇದರ ಬಗ್ಗೆ ಸಂಬಂಧಿತ ಆಡಳಿತಾಧಿಕಾರಿಗಳು ಗಮನ ಹರಿಸಬೇಕು ಎಂದರು.</p>.<p>ಈ ಬಾರಿಯ ಜಾತ್ರೋತ್ಸವ ಕಾರ್ಯಕ್ರಮ ಚೆನ್ನಾಗಿ ನಡೆದಿದೆ. ಕ್ಷೇತ್ರದ ಶಾಸಕರ ಆಶೋತ್ತರದಂತೆ ಅಳವಡಿಸಲಾದ ವಿದ್ಯುತ್ ದೀಪವನ್ನು ಪಿಡಿಒ ಕತ್ತರಿಸಿದ್ದು, ಹಾಗೂ ಶಾಸಕರ ಸೂಚನೆಯಂತೆ ನಿರುಪಯುಕ್ತವಾಗಿದ್ದ ಕುಡಿಯುವ ನೀರಿನ ಘಟಕವನ್ನು ದೇವಳದ ವೆಚ್ಚದಲ್ಲಿ ತೆರವು ಮಾಡಿರುವುದಕ್ಕೆ ನೋಟಿಸ್ ಜಾರಿ ಮಾಡಿರುವುದು ಬೇಸರ ತಂದಿದೆ ಎಂದರು.</p>.<p>ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೆಂಕಪ್ಪ ಪೂಜಾರಿ ಮರುವೇಲು, ಡಾ.ರಮ್ಯ ರಾಜಾರಾಮ್, ಸೋಮನಾಥ, ಗೋಪಾಲಕೃಷ್ಣ ರೈ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260328-29-1315564880</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>