ನೆರವಿಗೆ ಬಂದ ಶಾಸಕ:ಶ್ರೀಮಧು ಅವರ ತಂದೆ ತಾಯಿ, ಮಗಳನ್ನು ಕರೆತರಲು ಪಾಸ್ ಕೋರಿ ಮಂಗಳೂರು ಉಪ ವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಅವರಿಂದ ಸ್ಪಂದನೆ ದೊರಕದಿದ್ದಾಗ ಜಿಲ್ಲಾಧಿಕಾರಿ ಬಳಿ ಹೋಗಿದ್ದರು. ಅಲ್ಲಿಯೂ ಪಾಸ್ ದೊರಯಲಿಲ್ಲ. ತಮ್ಮ ಕುಟುಂಬ ಸ್ನೇಹಿತರಾದ ವಕೀಲ ಅರುಣ್ ಬಂಗೇರ ಎಂಬುವವರನ್ನು ಸಂಪರ್ಕಿಸಿದ್ದ ದಂಪತಿ, ಮಗಳನ್ನು ಕರೆತರಲು ನೆರವಾಗುವಂತೆ ಕೋರಿದ್ದರು.