ಕಾರವಾರ: ‘15 ವರ್ಷಗಳ ನಂತರ ಜಿಲ್ಲೆಯ ಅಭಿವೃದ್ಧಿ ಹೇಗಿರಬೇಕು ಎಂದು ಯೋಚಿಸಿ ವಿವಿಧ ಯೋಜನೆಗಳನ್ನು ಜಾರಿ ಮಾಡಲಾಗುತ್ತದೆ. ಕೆಲವರು ಪರಿಸರ, ಮೀನುಗಾರಿಕೆ ಹೆಸರಲ್ಲಿ ವಿರೋಧ ಮಾಡುತ್ತಾರೆ. ನ್ಯಾಯಾಲಯದ ಆದೇಶದ ಪಾಲನೆಯೊಂದಿಗೆ, ಶಾಂತಿಗೆ ಭಂಗವಾಗದಂತೆ, ಸ್ಥಳೀಯರಿಗೆ ನೋವಾಗದಂತೆ ಕಾಮಗಾರಿಗಳನ್ನು ಮುಂದುವರಿಸಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.