ಮಂಗಳೂರು: ನಗರದ ಬಜಾಲ್ನ ಜ್ಞಾನಜ್ಯೋತಿ ಸಂಸ್ಥೆಯು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಾರ್ಷಿಕವಾಗಿ ನೀಡುವ ‘ಜ್ಞಾನ ಜ್ಯೋತಿ ಪ್ರಶಸ್ತಿ’ಗೆ ಯಕ್ಷಗಾನ ಕಲಾವಿದ, ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ವಾದಿರಾಜ ಕಲ್ಲೂರಾಯ ಆಯ್ಕೆಯಾಗಿದ್ದಾರೆ.
ಸಾಹಿತ್ಯ, ಮಾಧ್ಯಮ, ಕಲೆ, ಸಂವಹನ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ₹ 10ಸಾವಿರ ಗೌರವಧನ ಒಳಗೊಂಡಿದೆ. ಅಕ್ಟೋಬರ್ 25ಕ್ಕೆ ಮಂಗಳೂರು ಬಜಾಲ್ನ ಪ್ರಜ್ಞಾ ಮಂದಾರ ಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ವಸಿಷ್ಠ ಭಟ್ ತಿಳಿಸಿದ್ದಾರೆ.