ಬೆಳ್ತಂಗಡಿ: ‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಐತಿಹಾಸಿಕ ಕ್ಷಣದಲ್ಲಿದ್ದು, ಈ ದೇಶಕ್ಕೆ ತ್ಯಾಗ, ಬಲಿದಾನ ನೀಡಿದವರನ್ನು ಸ್ಮರಿಸುವ ಜೊತೆ ರಾಷ್ಟ್ರಧ್ವಜ ಹಾಗೂ ಆಚರಣೆಯ ಅರ್ಥವನ್ನು ಅರಿತುಕೊಳ್ಳಬೇಕಿದೆ. ಸಂಭ್ರಮದ ಹೆಸರಿನಲ್ಲಿ ರಾಷ್ಟ್ರಕ್ಕೆ ಹಾಗೂ ಆಚರಣೆಗೆ ಅಪಮಾನ ಮಾಡದಿರಿ’ ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಹೇಳಿದರು.