ಬಜ್ಪೆ: ಇದೇ 10ರಂದು ನಡೆದ ಕಾರ್ಕಳದಲ್ಲಿ ನಡೆದ ಗೂಡುದೀಪ ಸ್ಪರ್ಧೆಯಲ್ಲಿ ಬಜ್ಪೆ ಗುರುಪುರ ಸಮೀಪದ ಸುಂಕದಕಟ್ಟೆಯ ಜಗದೀಶ ಕೆ. ಅಮೀನ್ ಅವರು ‘ಬಸಳೆ ಹಾಗೂ ಇತರ ತರಕಾರಿಗಳಿಂದ ತಯಾರಿಸಿದ ಗೂಡುದೀಪ’ ಜನಮೆಚ್ಚಿದ ಪ್ರಶಸ್ತಿ ಗಳಿಸಿದೆ.
ಕಳೆದ ವರ್ಷವೂ ಇವರಿಗೆ ಈ ಪ್ರಶಸ್ತಿ ಲಭಿಸಿತ್ತು. ಕಾರ್ಕಳದ ಆನೆಕೆರೆ ಸದ್ಯೋಜಾತ ಪಾರ್ಕ್ನಲ್ಲಿ ಶ್ರೀ ಶುಭದಾ ರಾವ್ ಇವರ ಸಂಯೋಜನೆಯಲ್ಲಿ ಮೂರು ವರ್ಷಗಳಿಂದ ಸ್ಪರ್ಧೆ ಆಯೋಜಿಸಲಾಗುತ್ತಿದೆ.