ಕಳ್ಳರು ನಕಲಿ ಚಾವಿ ಬಳಸಿ ವಾಹನ ಕಳ್ಳತನ ಮಾಡುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದೇ 19ರಂದು ಬೆಳ್ತಂಗಡಿಯ ಒಬ್ಬರು ಹಾಗೂ ಇದೇ 27ರಂದು ಕುಂದಾಪುರದ ವ್ಯಕ್ತಿಯೊಬ್ಬರ ಓಮ್ನಿ ಕಾರು ಕಳವಾದ ಬಗ್ಗೆ ದೂರು ದಾಖಲಾಗಿದೆ. ಕಳೆದ ಷಷ್ಠಿ ಸಂದರ್ಭದಲ್ಲೂ ಒಂದು ವಾಹನ ಕಳವಾದ ಬಗ್ಗೆ ದೂರು ದಾಖಲಾಗಿತ್ತು. ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತ ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.