<p><strong>ಮಂಗಳೂರು</strong>: ದೇಶದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ವೃದ್ಧಿ, ತಲಾ ಆದಾಯ ಹೆಚ್ಚಳ, ಆರೋಗ್ಯ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸದೃಢಗೊಂಡರೆ ಭಾರತವು 2047ನೇ ಇಸವಿಯ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಧ್ಯವಿದೆ. ಪ್ರಸ್ತುತ ದೇಶ ಮುನ್ನಡೆಯುತ್ತಿರುವ ಮಾರ್ಗವು ಈ ಗುರಿಗೆ ಪೂರಕವಾಗಿದೆ ಎಂಬ ಅಭಿಪ್ರಾಯ ‘ವಿಕಸಿತ ಭಾರತದತ್ತ ಭಾರತದ ಆರ್ಥಿಕತೆ’ ಕುರಿತ ಸಂವಾದದಲ್ಲಿ ವ್ಯಕ್ತವಾಯಿತು.</p>.<p>ಬಿಜೆಪಿ ದಕ್ಷಿಣ ಕನ್ನಡದ ಆರ್ಥಿಕ ಸೆಲ್ ವತಿಯಿಂದ ಇಲ್ಲಿ ನಡೆದ ಸಂವಾದದಲ್ಲಿ ಬಿಜೆಪಿ ಆರ್ಥಿಕ ಸೆಲ್ನ ರಾಜ್ಯ ಘಟಕದ ಸಂಯೋಜಕ ಪ್ರಶಾಂತ್ ಜಿ.ಎಸ್, ಆರ್ಥಿಕ ತಜ್ಞ ರಾಜೇಶ್ ರಾವ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಭಾಗವಹಿಸಿದರು.</p>.<p>ಪ್ರಶಾಂತ್ ಜಿ.ಎಸ್ ಮಾತನಾಡಿ, ಹಿಂದಿನ ವರ್ಣಾಶ್ರಮವನ್ನು ಈಗ ಬಡವ, ಯುವ, ಅನ್ನದಾತ ಹಾಗೂ ನಾರಿಶಕ್ತಿ ಈ ನಾಲ್ಕು ಜಾತಿಗಳಾಗಿ ಪರಿಗಣಿಸಿ, ಇವರ ಉನ್ನತಿ ಶ್ರಮಿಸಿದಾಗ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ದೇಶದ ಪ್ರಧಾನಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನಾಲ್ಕು ವಿಭಾಗದವರಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದರು.</p>.<p>ಪ್ರಸ್ತುತ ಭಾರತದ ಜನಸಂಖ್ಯೆ 140 ಕೋಟಿ ಇದ್ದು, ಇವರಲ್ಲಿ 7.75 ಕೋಟಿ ಜನರು ಮಾತ್ರ ಆದಾಯ ತೆರಿಗೆ ಫೈಲ್ ಮಾಡುತ್ತಾರೆ. ಹೊಸ ಆದಾಯ ತೆರಿಗೆ ಮಾನದಂಡದಂತೆ, ಇವರಲ್ಲಿ ಇನ್ನು ತೆರಿಗೆ ಪಾವತಿಸುವವರು 1.5 ಕೋಟಿ ಜನರು ಮಾತ್ರ. ಈ 1.5 ಕೋಟಿ ಜನರು ಇಡೀ ದೇಶದ ಜನರನ್ನು ಸಾಕುವಂತಾಗಿದೆ. ದೇಶದ ಶೇ 90ರಷ್ಟು ಜನರು ಆದಾಯ ತೆರಿಗೆ ಪಾವತಿಸುವ ಮಟ್ಟ ತಲುಪಿದಾಗ ದೇಶ ವಿಕಸಿತ ಭಾರತ ಆಗಲು ಸಾಧ್ಯ ಎಂದು ಹೇಳಿದರು.</p>.<p>ರಾಜೇಶ್ ರಾವ್ ಮಾತನಾಡಿ, ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳಲ್ಲಿ 40 ಅಭಿವೃದ್ಧಿ ಹೊಂದಿದ ರಾಷ್ಟ್ರಗಳು, 21 ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಇವೆ. ಚೀನಾ ಸಾಕಷ್ಟು ಮುಂದುವರಿದಿದ್ದರೂ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಈ ದೇಶದ ಹೆಸರು ಸೇರಿಕೊಂಡಿಲ್ಲ. ಅಮೆರಿಕ ಈ ಪಟ್ಟಿಯಲ್ಲಿದೆ. ಜನಸಂಖ್ಯೆ ಆಧಾರದಲ್ಲಿ ಭಾರತವನ್ನು ಚೀನಾ ಹೋಲಿಸಿಕೊಂಡು, ನಾವು ಅಭಿವೃದ್ಧಿಯತ್ತ ಯೋಚಿಸಬೇಕಾಗಿದೆ. ಚೀನಾದ ಜಿಡಿಪಿ ನಮಗಿಂತ ಸಾಕಷ್ಟು ಹೆಚ್ಚಿದೆ. ಭಾರತದ ಪ್ರಸ್ತುತ ಜಿಡಿಪಿ 4.2 ಟ್ರಿಲಿಯನ್ ಇದ್ದು, 2047ರ ವೇಳೆಗೆ 25 ಟ್ರಿಲಿಯನ್ ತಲುಪಬೇಕಾಗಿದೆ ಎಂದರು.</p>.<p>ನಮ್ಮ ತಲಾ ಆದಾಯ ಹೆಚ್ಚಳ ತಲಾ ಆದಾಯ ₹1 ಲಕ್ಷ ತಲುಪಬೇಕು. ಮನುಷ್ಯನ ಜೀವಿತಾವಧಿ ಹೆಚ್ಚಳ, ಕೈಗಾರಿಕೀಕರಣ ಹೆಚ್ಚಳ, ಅಧಿಕ ಪ್ರಮಾಣದ ರಫ್ತು, ಖಾಸಗಿ ಕ್ಷೇತ್ರದ ಸಕ್ರಿಯ ಪಾಲ್ಗೊಳ್ಳುವಿಕೆ ಇವೆಲ್ಲವೂ ಸಾಕಾರಗೊಂಡಾಗ ವಿಕಸಿತ ಭಾರತದ ಗುರಿ ತಲುಪುವುದು ಕಷ್ಟವಲ್ಲ ಎಂದು ಅವರು ಹೇಳಿದರು.</p>.<p>ಶಾಸಕ ವೇದವ್ಯಾಸ ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಪ್ರೇಮಾನಂದ ಶೆಟ್ಟಿ ಇದ್ದರು. ಬಿಜೆಪಿ ಆರ್ಥಿಕ ಸೆಲ್ನ ಸಹ ಸಂಯೋಜಕ ಎಸ್.ಎಸ್.ನಾಯಕ್ ಸಂವಾದ ಸಮನ್ವಯಕಾರರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ದೇಶದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ವೃದ್ಧಿ, ತಲಾ ಆದಾಯ ಹೆಚ್ಚಳ, ಆರೋಗ್ಯ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸದೃಢಗೊಂಡರೆ ಭಾರತವು 2047ನೇ ಇಸವಿಯ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಧ್ಯವಿದೆ. ಪ್ರಸ್ತುತ ದೇಶ ಮುನ್ನಡೆಯುತ್ತಿರುವ ಮಾರ್ಗವು ಈ ಗುರಿಗೆ ಪೂರಕವಾಗಿದೆ ಎಂಬ ಅಭಿಪ್ರಾಯ ‘ವಿಕಸಿತ ಭಾರತದತ್ತ ಭಾರತದ ಆರ್ಥಿಕತೆ’ ಕುರಿತ ಸಂವಾದದಲ್ಲಿ ವ್ಯಕ್ತವಾಯಿತು.</p>.<p>ಬಿಜೆಪಿ ದಕ್ಷಿಣ ಕನ್ನಡದ ಆರ್ಥಿಕ ಸೆಲ್ ವತಿಯಿಂದ ಇಲ್ಲಿ ನಡೆದ ಸಂವಾದದಲ್ಲಿ ಬಿಜೆಪಿ ಆರ್ಥಿಕ ಸೆಲ್ನ ರಾಜ್ಯ ಘಟಕದ ಸಂಯೋಜಕ ಪ್ರಶಾಂತ್ ಜಿ.ಎಸ್, ಆರ್ಥಿಕ ತಜ್ಞ ರಾಜೇಶ್ ರಾವ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಭಾಗವಹಿಸಿದರು.</p>.<p>ಪ್ರಶಾಂತ್ ಜಿ.ಎಸ್ ಮಾತನಾಡಿ, ಹಿಂದಿನ ವರ್ಣಾಶ್ರಮವನ್ನು ಈಗ ಬಡವ, ಯುವ, ಅನ್ನದಾತ ಹಾಗೂ ನಾರಿಶಕ್ತಿ ಈ ನಾಲ್ಕು ಜಾತಿಗಳಾಗಿ ಪರಿಗಣಿಸಿ, ಇವರ ಉನ್ನತಿ ಶ್ರಮಿಸಿದಾಗ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ದೇಶದ ಪ್ರಧಾನಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನಾಲ್ಕು ವಿಭಾಗದವರಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದರು.</p>.<p>ಪ್ರಸ್ತುತ ಭಾರತದ ಜನಸಂಖ್ಯೆ 140 ಕೋಟಿ ಇದ್ದು, ಇವರಲ್ಲಿ 7.75 ಕೋಟಿ ಜನರು ಮಾತ್ರ ಆದಾಯ ತೆರಿಗೆ ಫೈಲ್ ಮಾಡುತ್ತಾರೆ. ಹೊಸ ಆದಾಯ ತೆರಿಗೆ ಮಾನದಂಡದಂತೆ, ಇವರಲ್ಲಿ ಇನ್ನು ತೆರಿಗೆ ಪಾವತಿಸುವವರು 1.5 ಕೋಟಿ ಜನರು ಮಾತ್ರ. ಈ 1.5 ಕೋಟಿ ಜನರು ಇಡೀ ದೇಶದ ಜನರನ್ನು ಸಾಕುವಂತಾಗಿದೆ. ದೇಶದ ಶೇ 90ರಷ್ಟು ಜನರು ಆದಾಯ ತೆರಿಗೆ ಪಾವತಿಸುವ ಮಟ್ಟ ತಲುಪಿದಾಗ ದೇಶ ವಿಕಸಿತ ಭಾರತ ಆಗಲು ಸಾಧ್ಯ ಎಂದು ಹೇಳಿದರು.</p>.<p>ರಾಜೇಶ್ ರಾವ್ ಮಾತನಾಡಿ, ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳಲ್ಲಿ 40 ಅಭಿವೃದ್ಧಿ ಹೊಂದಿದ ರಾಷ್ಟ್ರಗಳು, 21 ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಇವೆ. ಚೀನಾ ಸಾಕಷ್ಟು ಮುಂದುವರಿದಿದ್ದರೂ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಈ ದೇಶದ ಹೆಸರು ಸೇರಿಕೊಂಡಿಲ್ಲ. ಅಮೆರಿಕ ಈ ಪಟ್ಟಿಯಲ್ಲಿದೆ. ಜನಸಂಖ್ಯೆ ಆಧಾರದಲ್ಲಿ ಭಾರತವನ್ನು ಚೀನಾ ಹೋಲಿಸಿಕೊಂಡು, ನಾವು ಅಭಿವೃದ್ಧಿಯತ್ತ ಯೋಚಿಸಬೇಕಾಗಿದೆ. ಚೀನಾದ ಜಿಡಿಪಿ ನಮಗಿಂತ ಸಾಕಷ್ಟು ಹೆಚ್ಚಿದೆ. ಭಾರತದ ಪ್ರಸ್ತುತ ಜಿಡಿಪಿ 4.2 ಟ್ರಿಲಿಯನ್ ಇದ್ದು, 2047ರ ವೇಳೆಗೆ 25 ಟ್ರಿಲಿಯನ್ ತಲುಪಬೇಕಾಗಿದೆ ಎಂದರು.</p>.<p>ನಮ್ಮ ತಲಾ ಆದಾಯ ಹೆಚ್ಚಳ ತಲಾ ಆದಾಯ ₹1 ಲಕ್ಷ ತಲುಪಬೇಕು. ಮನುಷ್ಯನ ಜೀವಿತಾವಧಿ ಹೆಚ್ಚಳ, ಕೈಗಾರಿಕೀಕರಣ ಹೆಚ್ಚಳ, ಅಧಿಕ ಪ್ರಮಾಣದ ರಫ್ತು, ಖಾಸಗಿ ಕ್ಷೇತ್ರದ ಸಕ್ರಿಯ ಪಾಲ್ಗೊಳ್ಳುವಿಕೆ ಇವೆಲ್ಲವೂ ಸಾಕಾರಗೊಂಡಾಗ ವಿಕಸಿತ ಭಾರತದ ಗುರಿ ತಲುಪುವುದು ಕಷ್ಟವಲ್ಲ ಎಂದು ಅವರು ಹೇಳಿದರು.</p>.<p>ಶಾಸಕ ವೇದವ್ಯಾಸ ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಪ್ರೇಮಾನಂದ ಶೆಟ್ಟಿ ಇದ್ದರು. ಬಿಜೆಪಿ ಆರ್ಥಿಕ ಸೆಲ್ನ ಸಹ ಸಂಯೋಜಕ ಎಸ್.ಎಸ್.ನಾಯಕ್ ಸಂವಾದ ಸಮನ್ವಯಕಾರರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>