ಎಸ್ಕೆಎಫ್ನ ಆಡಳಿತ ನಿರ್ದೆಶಕ ಪ್ರಮೋದ್ ಕುಮಾರ್ ಮಾತನಾಡಿ, ಸ್ಥಳೀಯರಿಗೆ ತೊಂದರೆ ಆಗುವುದನ್ನು ಮನಗಂಡು ಶೌಚಾಲಯವನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದ್ದೇವೆ, ಹೊಸದಾಗಿ ಪೈಂಟಿಂಗ್ ಬೂತ್ ನಿರ್ಮಾಣವಾಗುತ್ತಿದೆ. ಜನವಸತಿ ಪ್ರದೇಶಕ್ಕೆ ಹತ್ತಿರವಿದ್ದ ವರ್ಕ್ಶಾಪ್ ಅನ್ನು ಅಲ್ಲಿಂದ ಬೇರೆಡೆಗೆ ವರ್ಗಾಯಿಸಿದ್ದೇವೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನವನ್ನು, ಪಂಚಾಯಿತಿ ಆದೇಶವನ್ನು ಪಾಲಿಸಿಕೊಂಡು ಬಂದಿದ್ದೇವೆ. ಪರವಾನಗಿ ನವೀಕರಣಕ್ಕೆ ಅರ್ಜಿ ಹಾಕಿದರೂ, ನವೀಕರಿಸಿಲ್ಲ. ಆದಾಗ್ಯೂ ಪಂಚಾಯಿತಿ ಆಡಳಿತ ಕೆಲ ಮಂದಿ ಒತ್ತಡಕ್ಕೆ ಮಣಿದು ಆಗಾಗ್ಗೆ ನೋಟಿಸ್ ಕೊಟ್ಟು ತೊಂದರೆ ಕೊಡುತ್ತಿದೆ. ಕಂಪನಿಗೆ ಬೀಗ ಹಾಕಲು ಬಂದಿರುವುದು ಕಾನೂನು ಬಾಹಿರ, ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು.