ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು, ‘ಬಸದಿಯ ಪುನರ್ ನಿರ್ಮಾಣದೊಂದಿಗೆ
ವಿಟ್ಲ ಭಾಗದ ಜನರ ಪುಣ್ಯ ಹೆಚ್ಚಾಗಲಿದೆ. ಹಿಂದೂ, ಜೈನ ಧರ್ಮದೊಳಗಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ. ಧಾನ, ಧರ್ಮ ಹಾಗೂ ಪ್ರೇರಣೆ ನಮ್ಮೊಳಗಿರಬೇಕು. ಇಂತಹ ಪಾವನ ಕ್ಷೇತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಜೀವನದಲ್ಲಿ ಸಂತೋಷ ಪ್ರಾಪ್ತಿಯಾಗುತ್ತದೆ’ ಎಂದರು.