<p><strong>ವಿಟ್ಲ</strong>: ವಿಟ್ಲ ತಾಲ್ಲೂಕು ರಚನೆ ಮತ್ತು ವಿಟ್ಲ ವಿಧಾನಸಭಾ ಕ್ಷೇತ್ರದ ಮರುಸ್ಥಾಪನೆಗೆ ಒತ್ತಾಯಿಸಿ ವಿಟ್ಲದಲ್ಲಿ ಸಭೆ ನಡೆಸಿ ನೂತನ ಸಮಿತಿ ರಚಿಸಲಾಯಿತು.</p>.<p>ವಿಟ್ಲ ತಾಲ್ಲೂಕು ರಚನೆ ಮತ್ತು ವಿಧಾನಸಭೆ ಕ್ಷೇತ್ರ ಮರುಸ್ಥಾಪನೆ ಆಗ್ರಹ ಹೋರಾಟ ಸಮಿತಿಯ ಗೌರವಾಧ್ಯಕ್ಷರಾಗಿ ವಿಟ್ಲ ಅರಮನೆಯ ಬಂಗಾರು ಅರಸರು ಮತ್ತು ಹಿರಿಯ ಹೋರಾಟಗಾರ ಮುರುವ ನಡುಮನೆ ಮಹಾಬಲ ಭಟ್ ಅವರನ್ನು ಆಯ್ಕೆ ಮಾಡಲಾಯಿತು.</p>.<p>ಅಧ್ಯಕ್ಷರಾಗಿ ಬಿ.ಕೆ.ಬಶೀರ್, ಸಂಚಾಲಕರಾಗಿ ರಾಮಣ್ಣ ಪಾಲಿಗೆ, ಉಪಾಧ್ಯಕ್ಷರಾಗಿ ಹಸೈನಾರ್ ಕಡಂಬು, ಸುದರ್ಶನ ಪಡಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ರಮಾನಾಥ ವಿಟ್ಲ, ಕಾರ್ಯದರ್ಶಿಯಾಗಿ ಕಾನ ಈಶ್ವರ ಭಟ್, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ರಹಮಾನ್ ನೆಲ್ಲಿಗುಡ್ಡೆ , ಜತೆ ಕಾರ್ಯ ದರ್ಶಿಯಾಗಿ ಸದಾನಂದ ಗೌಡ ಸೇರಾಜೆ ಅವರನ್ನು ಆರಿಸಲಾಯಿತು. ಸದಸ್ಯರಾಗಿ ಜಾನ್ ಡಿಸೋಜ ,ಅಶ್ವಿನಿ ಪೆರುವಾಯಿ, ಪ್ರೇಮಲತಾ ಆಯ್ಕೆಯಾದರು.</p>.<p>ಸಭೆಯಲ್ಲಿ ಉಪಸ್ಥಿತರಿದ್ದ ಮುರುವ ನಡುಮನೆ ಮಹಾಬಲ ಭಟ್, ಬಿ.ಕೆ.ಬಶೀರ್, ಕಾನ ಈಶ್ವರ ಭಟ್, ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ರಾಮಣ್ಣ ಪಾಲಿಗೆ, ರಮಾನಾಥ ವಿಟ್ಲ, ಜಯರಾಮ ಬಳ್ಳಾಲ್, ಹಸೈನಾರ್ ಕಡಂಬು ಸಲಹೆ ಸೂಚನೆ ಮುಂದಿಟ್ಟರು.</p>.<p>ಉದ್ದೇಶಿತ ವಿಟ್ಲ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಸಭೆ ನಡೆಸಿ ಅಲ್ಲಿನ ಸದಸ್ಯರನ್ನು ಸೇರಿಸಿಕೊಳ್ಳುವುದು. ವ್ಯಾಪ್ತಿಯ ಶಾಸಕರಿಗೆ, ಸಭಾಪತಿಗೆ ಮನವಿ ಮಾಡುವುದು. ವಿಟ್ಲದಲ್ಲಿ ಸಭೆ ನಡೆಸುವುದು ಇತ್ಯಾದಿ ನಿರ್ಣಯ ಕೈಗೊಳ್ಳಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-29-203653563</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಟ್ಲ</strong>: ವಿಟ್ಲ ತಾಲ್ಲೂಕು ರಚನೆ ಮತ್ತು ವಿಟ್ಲ ವಿಧಾನಸಭಾ ಕ್ಷೇತ್ರದ ಮರುಸ್ಥಾಪನೆಗೆ ಒತ್ತಾಯಿಸಿ ವಿಟ್ಲದಲ್ಲಿ ಸಭೆ ನಡೆಸಿ ನೂತನ ಸಮಿತಿ ರಚಿಸಲಾಯಿತು.</p>.<p>ವಿಟ್ಲ ತಾಲ್ಲೂಕು ರಚನೆ ಮತ್ತು ವಿಧಾನಸಭೆ ಕ್ಷೇತ್ರ ಮರುಸ್ಥಾಪನೆ ಆಗ್ರಹ ಹೋರಾಟ ಸಮಿತಿಯ ಗೌರವಾಧ್ಯಕ್ಷರಾಗಿ ವಿಟ್ಲ ಅರಮನೆಯ ಬಂಗಾರು ಅರಸರು ಮತ್ತು ಹಿರಿಯ ಹೋರಾಟಗಾರ ಮುರುವ ನಡುಮನೆ ಮಹಾಬಲ ಭಟ್ ಅವರನ್ನು ಆಯ್ಕೆ ಮಾಡಲಾಯಿತು.</p>.<p>ಅಧ್ಯಕ್ಷರಾಗಿ ಬಿ.ಕೆ.ಬಶೀರ್, ಸಂಚಾಲಕರಾಗಿ ರಾಮಣ್ಣ ಪಾಲಿಗೆ, ಉಪಾಧ್ಯಕ್ಷರಾಗಿ ಹಸೈನಾರ್ ಕಡಂಬು, ಸುದರ್ಶನ ಪಡಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ರಮಾನಾಥ ವಿಟ್ಲ, ಕಾರ್ಯದರ್ಶಿಯಾಗಿ ಕಾನ ಈಶ್ವರ ಭಟ್, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ರಹಮಾನ್ ನೆಲ್ಲಿಗುಡ್ಡೆ , ಜತೆ ಕಾರ್ಯ ದರ್ಶಿಯಾಗಿ ಸದಾನಂದ ಗೌಡ ಸೇರಾಜೆ ಅವರನ್ನು ಆರಿಸಲಾಯಿತು. ಸದಸ್ಯರಾಗಿ ಜಾನ್ ಡಿಸೋಜ ,ಅಶ್ವಿನಿ ಪೆರುವಾಯಿ, ಪ್ರೇಮಲತಾ ಆಯ್ಕೆಯಾದರು.</p>.<p>ಸಭೆಯಲ್ಲಿ ಉಪಸ್ಥಿತರಿದ್ದ ಮುರುವ ನಡುಮನೆ ಮಹಾಬಲ ಭಟ್, ಬಿ.ಕೆ.ಬಶೀರ್, ಕಾನ ಈಶ್ವರ ಭಟ್, ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ರಾಮಣ್ಣ ಪಾಲಿಗೆ, ರಮಾನಾಥ ವಿಟ್ಲ, ಜಯರಾಮ ಬಳ್ಳಾಲ್, ಹಸೈನಾರ್ ಕಡಂಬು ಸಲಹೆ ಸೂಚನೆ ಮುಂದಿಟ್ಟರು.</p>.<p>ಉದ್ದೇಶಿತ ವಿಟ್ಲ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಸಭೆ ನಡೆಸಿ ಅಲ್ಲಿನ ಸದಸ್ಯರನ್ನು ಸೇರಿಸಿಕೊಳ್ಳುವುದು. ವ್ಯಾಪ್ತಿಯ ಶಾಸಕರಿಗೆ, ಸಭಾಪತಿಗೆ ಮನವಿ ಮಾಡುವುದು. ವಿಟ್ಲದಲ್ಲಿ ಸಭೆ ನಡೆಸುವುದು ಇತ್ಯಾದಿ ನಿರ್ಣಯ ಕೈಗೊಳ್ಳಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-29-203653563</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>