ಗುಜರಾತನ ಉದ್ಯಮಿ ಡಾ.ಮನೋಜ್ ಶರ್ಮ, ಉಪ್ಪುನೀರಿನ ಸಿಗಡಿ ಕೃಷಿ ಪ್ರಗತಿ ಹೊಂದುತ್ತಿರುವ ಬಗ್ಗೆ ವಿವರಿಸಿ, ಭಾರತದ ಆರ್ಥಿಕ ಮಟ್ಟವನ್ನು ಹೆಚ್ಚಿಸುವ ಕುರಿತು ಮಾಹಿತಿ ನೀಡಿದರು. ನಗರದ ಪ್ರಗತಿಪರ ಮೀನು ಕೃಷಿಕ ಸನ್ನಿ ಡಿಸೋಜ, ಸಿಗಡಿ ಕೃಷಿಯಲ್ಲಿ ಬಯೋಫ್ಲಾಕ್ ತಾಂತ್ರಿಕತೆಯ ಬಗ್ಗೆ ಮಾಹಿತಿ ಒದಗಿಸಿದರು. ಕುವೈತ್ನ ಮೀನುಗಾರಿಕಾ ತಜ್ಞ ಡಾ.ಅಜಾದ್ ಇಸ್ಮಾಯಿಲ್ ಸಾಹೇಬ್, ಜಲ ಕೃಷಿಯಲ್ಲಿ ಜಲಚರ ಪ್ರಾಣಿಗಳ ಆರೋಗ್ಯ ಮತ್ತು ರೋಗಗಳ ನಿರ್ವಹಣೆಯ ಬಗ್ಗೆ ವಿವರಿಸಿದರು.