ಮಧ್ಯಾಹ್ನದ ಬಳಿಕ ಶಿವಮೊಗ್ಗದ ಪ್ರವಚನಕಾರ ಜಿ.ಎಸ್.ನಟೇಶ್ ನಡೆಸಿಕೊಟ್ಟ ‘ಮಂಕುತಿಮ್ಮನ ಕಗ್ಗ’ ಆಧಾರಿತ ಜೀವನ ಮೌಲ್ಯದ ವಿಶೇಷ ಉಪನ್ಯಾಸಕ್ಕೆ ಸಾಹಿತ್ಯಾಭಿಮಾನಿಗಳು ಮಾರು ಹೋದರು. ಜಿ.ಎಸ್.ನಟೇಶ್ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಯಾವೊಂದು ಬರಹವನ್ನು ತನ್ನ ಮುಂದೆ ಇಟ್ಟುಕೊಳ್ಳದೆ ಉಪನ್ಯಾಸ ನೀಡಿದರು. ಅವರ ಮಾತುಗಳನ್ನು ಇನ್ನಷ್ಟು ಕೇಳಬೇಕು ಎಂಬ ಮಾತುಗಳು ಸಭಿಕರಿಂದ ವ್ಯಕ್ತವಾದವು. ಆದರೆ ಇತರ ಕಾರ್ಯಕ್ರಮಗಳು ಹೆಚ್ಚು ಸಮಯ ತೆಗೆದುಕೊಂಡದ್ದರಿಂದ ಒಂದು ಗಂಟೆಯ ಅವರ ಉಪನ್ಯಾಸವನ್ನು ಅರ್ಧ ಗಂಟೆಗೇ ಇಳಿಸಬೇಕಾಗಿ ಬಂತು. ನಿವೃತ್ತ ಪ್ರಾಂಶುಪಾಲ ಗಣಪತಿ ಭಟ್ ಕುಳಮರ್ವ ನಿರೂಪಿಸಿದರು.