ನಂತರ ಎಸ್.ಪಿ.ವೈ.ಎಸ್.ಎಸ್. ಸಂಸ್ಥೆಯ ನುರಿತ ಯೋಗ ಶಿಕ್ಷಕರು ಶಿಬಿರಾರ್ಥಿಗಳಿಗೆ ಆಸನಗಳನ್ನು ಕಲಿಸಿದರು. ಹಾಲು ಮತ್ತು ಹಾಲಿನ ಉತ್ಪನ್ನಗಳ ಬಗ್ಗೆ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ರವಿರಾಜ ಉಡುಪ ಮಾಹಿತಿ ನೀಡಿದರು. ನೋಡಲ್ ಅಧಿಕಾರಿ ಗೀತಾ ಶೆಟ್ಟಿ, ಎಸ್.ಪಿ.ವೈ.ಎಸ್.ಎಸ್.ಸಂಸ್ಥೆಯ ಶಿಕ್ಷಕ ಈಶ್ವರ, ವೇಣುಗೋಪಾಲ, ಗುರುರಾಜ ಉಪಸ್ಥಿತರಿದ್ದರು. ನಿತ್ಯಾನಂದ ಭಕ್ತ ಸ್ವಾಗತಿಸಿದರು. ಶಕುಂತಲ ಪ್ರಾರ್ಥಿಸಿದರು. ರತ್ನಾ ವಂದಿಸಿದರು. ಎಂ.ರವಿ ನಿರೂಪಿಸಿದರು.