ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಗ್ರಾಮ ಸಮಿತಿ ರಚನೆ: ಲುಕ್ಮಾನ್

Last Updated 24 ಸೆಪ್ಟೆಂಬರ್ 2022, 6:08 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಕಾರ್ಯ ಕಾರಿಣಿ ಸಭೆ ಗುರುವಾರ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಈಗಾಗಲೇ ಜಿಲ್ಲೆಯ 33 ಗ್ರಾಮಗಳಲ್ಲಿ ‘ಯೂತ್ ಜೋಡೊ ಬೂತ್ ಜೋಡೊ’ ಕಾರ್ಯಕ್ರಮದ ಮೂಲಕ ಯುವ ಕಾಂಗ್ರೆಸ್ ಗ್ರಾಮ ಸಮಿತಿಯನ್ನು ರಚಿಸಲಾಗಿದೆ. ಪ್ರತಿ ಗ್ರಾಮದಲ್ಲಿ ಈ ಕಾರ್ಯಕ್ರಮಕ್ಕೆ ಯಶಸ್ಸು ದೊರಕುತ್ತಿದ್ದು, ಡಿಸೆಂಬರ್‌ ತಿಂಗಳ ಪೂರ್ವದಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ಗ್ರಾಮ ಸಮಿತಿ ರಚನೆ ಮಾಡುವ ಮೂಲಕ ಪಕ್ಷ ಸಂಘಟನೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಯುವ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್ ಹೇಳಿದರು.

ಕೆಪಿವೈಸಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ಎಸ್., ಜಿಲ್ಲಾ ಘಟಕದ ಉಪಾಧ್ಯಕ್ಷ ಗಿರೀಶ್ ಆಳ್ವ, ಕೆಪಿವೈಸಿ ಕಾರ್ಯದರ್ಶಿ ಗಳಾದ ದೀಪಕ್ ರಾಜಾಹುಲಿ, ಸರ್ಫರಾಜ್ ನವಾಝ್, ನಾಸೀರ್ ಸಾಮಾನಿಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮಾನಂದ ಪೂಜಾರಿ, ಪ್ರಸಾದ್ ಮಲ್ಲಿ, ವೈಭವ ಶೆಟ್ಟಿ, ನವೀದ್ ಅಖ್ತರ್, ಅಭಿನಂದನ್ ಹರೀಶ್, ಹಸನ್ ಫಲ್ನೀರ್, ಅಶ್ವಥ್ ರಾಜ್, ದೀಕ್ಷಿತ್ ಅತ್ತಾವರ, ವಿಶಾಲ್ ಪೂಜಾರಿ, ಆಲ್ವಿನ್, ತುಫೇಲ್, ಅಭಿದೇವ್ ಅರಿಗ, ಸಂಜನ ಛಲವಾದಿ, ನಝೀಪ್, ಅಲ್ ಅಮೀನ್, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಶಾಹುಲ್ ಹಮೀದ್, ಸುನಿಲ್ ಕುಮಾರ್, ಅನಿಲ್ ಪೈ, ಅಶೋಕ್ ಪೂಜಾರ್, ಫಾರೂಕ್ ಪೆರ್ನೆ, ಶ್ರೀಪ್ರಸಾದ್, ರಾಕೇಶ್ ದೇವಾಡಿಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT