ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಅಂಕುಶ್ ಕುಮಾರ್ ಹೂಡೆ,‘ಕ್ಷತ್ರಿಯ ಸಮುದಾಯದ ಶ್ರೇಯೋಭಿವೃದ್ಧಿಯಲ್ಲಿ ಯುವಜನರು ತೊಡಗಿಕೊಳ್ಳುವಂತೆ ಉತ್ತೇಜಿಸಲು ಯುವಕ್ಷಾತ್ರ ಅಬ್ಬಕ್ಕನಾಡು ಸಂಘಟನೆಯನ್ನು ಸ್ಥಾಪಿಸಿದ್ದೇವೆ. ರಾಮಕ್ಷತ್ರಿಯರ ಇತಿಹಾಸ, ಜನಪದೀಯ, ಧಾರ್ಮಿಕ ಆಚರಣೆ ಪದ್ಧತಿಗಳ ತಿಳಿವಳಿಕೆ ಮೂಡಿಸಲು, ಸಾಂಸ್ಕೃತಿಕ, ಕ್ರೀಡೆ, ಚಟುವಟಿಕೆಯಲ್ಲಿ ಭಾಗವಹಿಸಲು, ರಾಜಕೀಯವಾಗಿ ಶಕ್ತಿ ಪಡೆಯಲು ಸಂಘಟನೆ ನೆರವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ, ಉದ್ಯೋಗ ಕೌಶಲ, ವೃತ್ತಿಪರ ಕೌಶಲ ಪಡೆದು ಸ್ವಂತ ಉದ್ಯೋಗ ಆರಂಭಿಸಲು ತರಬೇತಿ ಕಲ್ಪಿಸಲಿದೆ’ ಎಂದರು.