‘ಮಹಾರಾಷ್ಟ್ರದ ಕೊಲ್ಹಾಪುರದ ಶಿಲ್ಪಿ ಗೌತಮ್ ಅವರು ಎರಡು ತಿಂಗಳಿನಿಂದ ಇಟ್ಟಿಗೆಯನ್ನು ಸಿದ್ಧಪಡಿಸಿದ್ದು, ₹11 ಲಕ್ಷ ವೆಚ್ಚವಾಗಿದೆ. ಇಟ್ಟಿಗೆ ಮುಂಭಾಗ ಶ್ರೀರಾಮಮಂದಿರದ ಮಾದರಿ ಹಾಗೂ ಶ್ರೀರಾಮನ ಚಿತ್ರ ಬಿಡಿಸಲಾಗಿದೆ. ಮೇಲ್ಭಾಗದಲ್ಲಿ ‘ಜೈ ಶ್ರೀರಾಮ್’ ಎಂದು ಹಿಂದಿಯಲ್ಲಿ ಬರೆದಿದ್ದು, ಹಿಂಬದಿಯಲ್ಲಿ ಹುತಾತ್ಮರಾದ 8 ಮಂದಿಯ ಹೆಸರುಗಳನ್ನು ಕೆತ್ತಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.