ಆರೋಪಿಗಳು ರವಿರಾಜ್ ಅವರಿಗೆ 3 ಚೆಕ್ಗಳನ್ನು ನೀಡಿದ್ದು, ಅವುಗಳು ಬೌನ್ಸ್ ಆಗಿವೆ. ಇದರಿಂದ ಕೋಪಗೊಂಡ ರವಿರಾಜ್ ಆರೋಪಿಗಳಿಗೆ ಫೋನ್ ಮಾಡಿದಾಗ ಮಾತುಕತೆಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ. ಆನಂತರ ಬೆಂಗಳೂರಿಗೆ ಹೋದಾಗ ಆರೋಪಿಗಳು ಕಂಪನಿಯಲ್ಲಿ ಇರಲಿಲ್ಲ. ಮೊತ್ತೊಮ್ಮೆ ಸಂಪರ್ಕಿಸಿದಾಗ ‘ದಾವಣಗೆರೆಗೆ ಬಂದು ಕೊಡುತ್ತೇವೆ’ ಎಂದು ಹೇಳಿದ್ದಾರೆ. ಅಲ್ಲಿಯೂ ಹಣ ಕೊಡಲಿಲ್ಲ. ವಿದ್ಯಾನಗರ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.