1951ರಲ್ಲಿ 21ನೇ ವಯಸ್ಸಿಗೆ ದಾವಣಗೆರೆ ನಗರಸಭೆಯ ಅಧ್ಯಕ್ಷ ರಾಗಿ ಆಯ್ಕೆಯಾಗುವ ಮೂಲಕ ದೇಶದಲ್ಲಿಯೇ ನಗರಾಡಳಿತಗಳಲ್ಲಿ ಅತಿ ಕಿರಿಯ ವಯಸ್ಸಿನ ಅಧ್ಯಕ್ಷ ಎಂಬ ಹಿರಿಮೆಗೆ ಪಾತ್ರವಾಗಿದ್ದರು. ದಾವಣಗೆರೆ ಸ್ಟೇಡಿಯಂ, ಈಜುಕೊಳ ಅವರ ಆಡಳಿತದ ಕಾಲದಲ್ಲಿ ಆರಂಭಗೊಂಡಿದ್ದವು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ದಾವಣಗೆರೆ–ಚಿತ್ರದುರ್ಗ ಅವಿಭಜಿತ ಜಿಲ್ಲೆಯ ಪ್ರಥಮ ಕನ್ನಡ ದಿನಪತ್ರಿಕೆ ದಾವಣಗೆರೆ ‘ನಗರವಾಣಿ’ಯನ್ನು 1973ರಲ್ಲಿ ಆರಂಭಿಸಿದ್ದರು. ಸಿ.ಕೆ. ವಾಕ್ಶ್ರವಣ ಕೇಂದ್ರ, ಶಾಸ್ತ್ರಿಹಳ್ಳಿ ಮಾತಾ ಟ್ರಸ್ಟ್ ವೃದ್ಧಾಶ್ರಮ, ಸತ್ಯಸಾಯಿ ಶಾಲೆ, ರೋಟರಿ ಸಮುದಾಯಭವನ ಮುಂತಾದ ವುಗಳ ನಿರ್ಮಾಣಕ್ಕೆ ಅವರು ದಾನ ಮಾಡಿದ್ದರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ, ವರ್ಷದ ವ್ಯಕ್ತಿ ಮುಂತಾದ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.