‘ಅರ್ಧ ಎಕರೆಯಲ್ಲಿ ಕುಟುಂಬ ನಿರ್ವಹಣೆ ಮಾಡಲು ಆಗುವುದಿಲ್ಲ ಎಂದು ನನ್ನ ಪತಿ ಚಂದ್ರಪ್ಪ, ಇಬ್ಬರು ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಾರೆ. ನಾನು ಜಮೀನಿನಲ್ಲಿ ಬೆಳೆ ಬೆಳೆಯುತ್ತೇನೆ. ಈಗಾಗಲೆ ₹25,000 ಖರ್ಚು ಮಾಡಿದ್ದೇನೆ. ಧೂಳಿನಿಂದಾಗಿ ಬೆಳೆ ಕೈಗೆ ಸಿಗುವುದಿಲ್ಲ. ಒಂದು ದಿನಕ್ಕೆ 50ರಿಂದ 75 ಲೋಡ್ ಮಣ್ಣು ಸಾಗಣೆ ಮಾಡುತ್ತಿದ್ದು, 150 ಬಾರಿ ಈ ರಸ್ತೆಯಲ್ಲಿ ಭಾರಿ ಗಾತ್ರದ ಲಾರಿಗಳು ಓಡಾಡಿದರೆ ನಮ್ಮ ಬೆಳೆಯ ಗತಿ ಏನಾಗಬೇಕು’ ಎಂದು ಪ್ರಶ್ನಿಸಿದರು.