ದಾವಣಗೆರೆ: ಚನ್ನಗಿರಿ ತಾಲ್ಲೂಕು ಕತ್ತಲಗೆರೆ ಬಳಿಯ ಎಸ್.ಆರ್. ಕ್ಯಾಂಪ್ನಲ್ಲಿ ಬುಧವಾರ ರಾತ್ರಿ ಮಗನೇ ತಂದೆಯನ್ನು ಕೊಲೆ ಮಾಡಿದ್ದಾನೆ.
ಎಸ್.ಆರ್. ಕ್ಯಾಂಪ್ನ ಮಂಜುನಾಥ (60) ಕೊಲೆಯಾದವರು. ಅವರ ಮಗ ತಿಪ್ಪೇಶ್ (23) ಕೊಲೆ ಮಾಡಿದವನು. ಮನೆಯ ವಿಚಾರದಲ್ಲಿ ಬುಧವಾರ ತಂದೆ ಮಗನ ನಡುವೆ ವಾಗ್ವಾದ ಉಂಟಾಗಿದ್ದು, ಅದು ವಿಕೋಪಕ್ಕೆ ಹೋಗಿ ಮಗನೇ ಹೊಡೆದಿದ್ದಾನೆ. ಮಂಜುನಾಥ ಅವರು ಮೃತಪಟ್ಟಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಿ. ಬಸರಗಿ, ಚನ್ನಗಿರಿ ಡಿವೈಎಸ್ಪಿ ಸಂತೋಷ್, ಸಂತೇಬೆನ್ನೂರು ಸಿಪಿಐ ಮಹೇಶ್, ಬಸವಾಪಟ್ಟಣದ ಠಾಣೆಯ ಪೊಲೀಸರು ಇದ್ದರು.