ಭತ್ತಕ್ಕೆ ರಾಸಾಯನಿಕ ಗೊಬ್ಬರ, ಔಷಧ ಬಳಸುತ್ತಾರೆ. ತೋಟಕ್ಕೆ ಸಾವಯವ ಗೊಬ್ಬರ ಹಾಗೂ ಜೈವಿಕ ಔಷಧ ಬಳಸುತ್ತಾರೆ. ಕಳೆ, ಹುಲ್ಲನ್ನು ಯಂತ್ರದಿಂದ ತುಂಡು ಮಾಡಿ ಮತ್ತೆ ಮಣ್ಣಿಗೆ ಸೇರಿಸುತ್ತಾರೆ. ಹಳೆ
ಹಾಗೂ ಉದುರಿದ ಅಡಿಕೆ, ತೆಂಗಿನ ಗರಿಗಳನ್ನು ಸುಡುವ ಬದಲು ಮತ್ತೆ ಮಣ್ಣಿಗೆ ಸೇರಿಸಿ ಫಲವತ್ತತೆ ಹೆಚ್ಚಿಸಿದ್ದಾರೆ. ಭತ್ತ, ಅಡಿಕೆ, ತೆಂಗು, ಕಾಳುಮೆಣಸು ಇವರಿಗೆ ಉತ್ತಮ ಆದಾಯ ತರುತ್ತವೆ. ಉಳಿದಂತೆ ತರಕಾರಿ, ಹೂವಿನ ಬೆಳೆಯಿಂದಲೂ ಆದಾಯ ಇದೆ.