ದಾವಣಗೆರೆ: ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಕಲ್ಲು ಕ್ವಾರಿ ನಡೆಸುತ್ತಿದ್ದ ಸ್ಥಳಕ್ಕೆ ಬುಧವಾರ ಪೊಲೀಸರು ಭೇಟಿ ನೀಡಿದಾಗ ಗ್ರಾಮದ ಸರ್ವೇ ನಂ.68/9ರಲ್ಲಿಒಂದು ಜೀವಂತ ಎಲೆಕ್ಟ್ರಿಕಲ್ ಡಿಟೋನೇಟರ್ ಪತ್ತೆಯಾಗಿದೆ.
ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ.ತಾಮ್ರಧ್ವಜ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಬ್ಲಾಸ್ಟಿಂಗ್ ತಂಡದೊಂದಿಗೆ ಪೊಲೀಸರು ಭೇಟಿ ನೀಡಿದಾಗ ಕ್ವಾರಿಯಲ್ಲಿ ಯಾರೊಬ್ಬರೂ ಇರಲಿಲ್ಲ. ಈ ಸಂಬಂಧ ಕ್ವಾರಿ ಆಲೂರುಹಟ್ಟಿ ಗ್ರಾಮದ ಮಾಲೀಕ ಕುಮಾರನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದೆ.
ಎಸ್ಪಿ ಮಾರ್ಗದರ್ಶನದಲ್ಲಿ , ಪಿಎಸ್ಐ ಅಶ್ವಿನ್ ಕುಮಾರ್, ಭೂ ವಿಜ್ಞಾನ ಅಧಿಕಾರಿ ವಿನಯಾ ಬಣಕಾರ್, ಸಿಬ್ಬಂದಿ ಜಿ.ಎಲ್. ಮಂಜುನಾಥ್, ಎಸ್. ಮಂಜನಗೌಡ, ನಾಗರಾಜ್, ರಾಜು ಲಮಾಣಿ, ಹನುಮಂತಪ್ಪ ಇದ್ದರು.