ಕ್ಯಾನ್ಸರ್ ಪೀಡಿತರಾಗಿ ಗುಣವಾದ ಹಲವು ನಟ–ನಟಿಯರು, ಕ್ರೀಡಾಪಟುಗಳು ಹಾಗೂ ನಮ್ಮ ಸುತ್ತಮುತ್ತಲಿನ ಹಲವು ಮಹನೀಯರು ತಮಗೆ ಕಂಡು ಬಂದ ರೋಗ ಲಕ್ಷಣ, ತೆಗೆದುಕೊಂಡ ಚಿಕಿತ್ಸೆಯ ವಿವರ ತಿಳಿಸಿ ಮಾನಸಿಕ ದೃಢತೆಯನ್ನು ಪ್ರದರ್ಶಿಸುತ್ತಿರುವುದನ್ನು
ಕಾಣುತ್ತಿದ್ದೇವೆ. ಕ್ಯಾನ್ಸರ್ ಗೆದ್ದಿರುವ ದಾವಣಗೆರೆಯ ಕಲಾವಿದ ಆರ್.ಟಿ. ಅರುಣ್ಕುಮಾರ್ ಅವರೂ
ನಮ್ಮೆದುರಿಗೆ ಸ್ಫೂರ್ತಿಯ ಚಿಲುಮೆಯಂತಿದ್ದಾರೆ. ಇವರೊಂದಿಗೆ ನಾವೂ ಹೆಜ್ಜೆ ಹಾಕಿ ಜನರಲ್ಲಿ ಆರೋಗ್ಯ ಕಾಳಜಿ ಮೂಡಿಸುವ ಉತ್ಸಾಹ ಮೂಡಿದೆ. ಜನ ಜಾಗೃತಿಗೆ ಸಿನಿಮಾ ಸಹ ಅತ್ಯಂತ ಪರಿಣಾಮಕಾರಿ ಮಾಧ್ಯಮ. ಹೀಗಾಗಿ ಈ ಜಾಗೃತಿ ಜಾಥಾದಲ್ಲಿ ಪಾಲ್ಗೊಳ್ಳಲು
ಉತ್ಸುಕನಾಗಿದ್ದೇನೆ.