ಚಿರತೆ ಹಾವಳಿಯಿಂದ ಜನರು ಹೊಲಗಳಿಗೆ ತೆರಳದ ಸ್ಥಿತಿ ನಿರ್ಮಾಣವಾಗಿದೆ. ದನ, ನಾಯಿಗಳನ್ನು ಚಿರತೆಗಳು ತಿಂದು ಹಾಕುತ್ತಿವೆ. ಈ ಭಾಗದಲ್ಲಿ ಇನ್ನು ಮೂರು ಚಿರತೆ ವಾಸವಾಗಿವೆ. ಅವುಗಳ ಬಂಧನಕ್ಕೆ ಬೋನು ಇಡಬೇಕು ಎಂದು ಮತ್ತೂರು ಗ್ರಾಮಸ್ಥರಾದ ಜಿ. ಪ್ರಕಾಶ್, ಕೆ. ಬಸವರಾಜ, ಎಂ. ರವೀಂದ್ರಗೌಡ, ವಿಷ್ಣಪ್ಪ, ಪಿ. ಹನುಮಂತಪ್ಪ ಆಗ್ರಹಿಸಿದ್ದಾರೆ.