ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೂರಿನಲ್ಲಿ ಮತ್ತೊಂದು ಚಿರತೆ ಸೆರೆ

Last Updated 17 ಡಿಸೆಂಬರ್ 2018, 13:48 IST
ಅಕ್ಷರ ಗಾತ್ರ

ಹರಪನಹಳ್ಳಿ: ತಾಲ್ಲೂಕಿನ ಮತ್ತೂರು ಗ್ರಾಮದಲ್ಲಿ ಸೋಮವಾರ ನಾಲ್ಕು ವರ್ಷದ ಗಂಡು ಚಿರತೆಯೊಂದು ಬೋನಿಗೆ ಬಿದ್ದಿದೆ. ಇದರಿಂದ ಹತ್ತು ದಿನಗಳಲ್ಲಿ ಗ್ರಾಮದಲ್ಲಿ ಎರಡು ಚಿರತೆಗಳು ಸೆರೆ ಸಿಕ್ಕಂತಾಗಿವೆ.

ಮತ್ತೂರು, ಕಡತಿ, ಅಲಗಿಲವಾಡ, ನಂದ್ಯಾಲ, ವಟ್ಲಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆಗಳ ಹಾವಳಿಯಿಂದ ಜನರು ಆತಂಕಗೊಂಡಿದ್ದರು. ಅಲ್ಲದೇ ದನ-ಕರುಗಳನ್ನು ಚಿರತೆಗಳು ತಿಂದು ಹಾಕಿದ್ದವು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿದ್ದರಿಂದ ಮತ್ತೂರು ಗ್ರಾಮದಲ್ಲಿ ಚಿರತೆ ಸೆರೆಗೆ ಮುಂದಾಗಿದ್ದರು.

ಗ್ರಾಮದ ಇಟ್ಟಿಗುಡಿ ಹನುಮಂತಪ್ಪ ಅವರ ತೋಟದಲ್ಲಿ ಭಾನುವಾರ ರಾತ್ರಿ ಚಿರತೆ ಬೋನಿಗೆ ಬಿದ್ದಿದೆ. ಡಿ.6ರಂದು ಗ್ರಾಮದ ಅಂಬ್ಲಿ ಶಿವರಾಮಪ್ಪ ಅವರ ಕಣದಲ್ಲಿ ಇಡಲಾಗಿದ್ದ ಬೋನಿಗೆ ಗಂಡು ಚಿರತೆಯೊಂದು ಬಿದ್ದಿತ್ತು. ವಾರದಿಂದ ಈ ಭಾಗದಲ್ಲಿ ಬೋನು ಇಟ್ಟು ಅದರೊಳಗೆ ನಾಯಿ ಕಟ್ಟಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಬಲೆ ಬೀಸಿತ್ತು.

ಚಿರತೆ ಬೋನಿಗೆ ಬಿದ್ದಿದ್ದನ್ನು ಕಂಡ ಗ್ರಾಮಸ್ಥರಾದ ಗುಡ್ಡಪ್ಪ, ಹನುಮಂತಪ್ಪ, ಸುಧಾಕರ, ಅಂಬ್ಲಿ ಶಿವಣ್ಣ, ಟಿ.ಫಕ್ಕಿರಪ್ಪ ಅವರು ಬೋನನ್ನು ಭದ್ರಪಡಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದರು. ಇಲಾಖೆ ಸಿಬ್ಬಂದಿ ದಾವಣಗೆರೆ ಬಳಿಯಿರುವ ಆನಗೋಡು ಪ್ರಾಣಿ ಸಂಗ್ರಾಹಾಲಯಕ್ಕೆ ಚಿರತೆ ಬಿಟ್ಟಿದ್ದಾರೆ. ಬೋನಿಗೆ ಬಿದ್ದ ಚಿರತೆ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದರು.

ಚಿರತೆ ಹಾವಳಿಯಿಂದ ಜನರು ಹೊಲಗಳಿಗೆ ತೆರಳದ ಸ್ಥಿತಿ ನಿರ್ಮಾಣವಾಗಿದೆ. ದನ, ನಾಯಿಗಳನ್ನು ಚಿರತೆಗಳು ತಿಂದು ಹಾಕುತ್ತಿವೆ. ಈ ಭಾಗದಲ್ಲಿ ಇನ್ನು ಮೂರು ಚಿರತೆ ವಾಸವಾಗಿವೆ. ಅವುಗಳ ಬಂಧನಕ್ಕೆ ಬೋನು ಇಡಬೇಕು ಎಂದು ಮತ್ತೂರು ಗ್ರಾಮಸ್ಥರಾದ ಜಿ. ಪ್ರಕಾಶ್, ಕೆ. ಬಸವರಾಜ, ಎಂ. ರವೀಂದ್ರಗೌಡ, ವಿಷ್ಣಪ್ಪ, ಪಿ. ಹನುಮಂತಪ್ಪ ಆಗ್ರಹಿಸಿದ್ದಾರೆ.

ಅರಣ್ಯ ರಕ್ಷಕ ಲಕ್ಷ್ಮಣ, ಸಿಬ್ಬಂದಿಗಳಾದ ಶಿವಕುಮಾರ, ಕೆಂಚಪ್ಪ, ಹೊಳೆಯಪ್ಪ, ನಂದಪ್ಪ, ಇಫ್ತಿಯಾರ್, ಬಸವರಾಜ ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT