ಕೊಳೆಗೇರಿಗಳು, ಮಂಡಕ್ಕಿ ಭಟ್ಟಿ ಲೇಔಟ್ ಸುತ್ತಮುತ್ತಲಿನ ಪ್ರದೇಶದ ಜನ ಜೀವನ ಅಸ್ತವ್ಯಸ್ತವಾಯಿತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು. ಕೆ.ಬಿ. ಬಡಾವಣೆ, ಮಂಡಿಪೇಟೆ, ದೇವರಾಜ ನಗರ, ನಿಟುವಳ್ಳಿ, ಕೆಟಿಜೆ ನಗರ, ವಿನೋಬ ನಗರ, ಗಾಂಧಿನಗರ, ಆಜಾದ್ ನಗರ, ಕಾಡಪ್ಪನ ಕಣ, ಬಂಬೂ ಬಜಾರ್, ನೀಲಮ್ಮನ ತೋಟ, ಬೇತೂರು ರಸ್ತೆ, ಭಾರತ್ ಕಾಲೊನಿ, ಜಾಲಿ ನಗರದಲ್ಲಿ ಜನ ತೊಂದರೆಗೆ ಸಿಲುಕಿದರು. ಗ್ರಾಮೀಣ ಪ್ರದೇಶಗಳಲ್ಲಿ ಮೆಕ್ಕೆಜೋಳ, ಭತ್ತ ಸೇರಿ ವಿವಿಧ ಬೆಳೆಗಳಿಗೆ ಹಾನಿಯಾಗಿದೆ.