‘ಜಮೀನು ಸ್ವಾಧೀನ ಸಂಬಂಧ ಅಲ್ಲಾಭಕ್ಷ್ಗೆ ಪರಿಹಾರದ ಹಣ ನೀಡಲಾಗಿದೆ. ಬೆಳೆನಷ್ಟ ಸಂಬಂಧದ ವೈಯಕ್ತಿಕ ವ್ಯಾಜ್ಯದ ಪರಿಹಾರದ ಮೊತ್ತವನ್ನು ಸಿವಿಲ್ ನ್ಯಾಯಾಲಯದಲ್ಲಿ ಠೇವಣಿ ಇಡಲಾಗಿದೆ. ಈ ಹಣವನ್ನು ನೀಡುವಂತೆ ಆತ ಹಲವು ಬಾರಿ ಕಚೇರಿಗೆ ಬಂದು ಕೇಳುತ್ತಿದ್ದ. ನ್ಯಾಯಾಲಯಕ್ಕೆ ಹಾಜರಾಗಿ ಪರಿಹಾರದ ಹಣ ಪಡೆಯುವಂತೆ ಸೂಚಿಸಲಾಗಿತ್ತು. ಆದರೂ ಬುಧವಾರ ಕಚೇರಿ ಆವರಣದಲ್ಲಿ ಇದೇ ವಿಚಾರಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದು, ಕ್ರಮ ಕೈಗೊಳ್ಳಬೇಕು’ ಎಂದು ಗ್ರೇಡ್–2 ತಹಶೀಲ್ದಾರ್ ಗಿರೀಶ್ ಬಾಬು ದೂರು ದಾಖಲಿಸಿದ್ದಾರೆ.