ಮದ್ಯಾಹ್ನ 3ಕ್ಕೆ ಕವಿಗೋಷ್ಠಿ ನಡೆಯಲಿದ್ದು, ಎಚ್.ಎಲ್ ಪುಷ್ಪಾ ಆಶಯ ನುಡಿಗಳನ್ನಾಡುವರು. ಸುಕನ್ಯಾ ಮಾರುತಿ ಅಧ್ಯಕ್ಷತೆ ವಹಿಸುವರು. ನಾಡಿನ ವಿವಿಧ 25 ಕವಿಗಳು ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಲೇಖಕ ಜೆ.ಕಲಿಂಬಾಷಾ ಅಧ್ಯಕ್ಷತೆ ವಹಿಸುವರು. ಪತ್ರಕರ್ತ ಬಿ.ಎಂ.ಹನೀಫ್, ಮುಖಂಡರಾದ ಸಿದ್ಧನಗೌಡ ಪಾಟೀಲ್, ಎ.ಗೋವಿಂದರೆಡ್ಡಿ, ಎಚ್.ವಿಶ್ವನಾಥ್, ಭಕ್ತರಳ್ಳಿ ಕಾಮರಾಜ್, ಎಚ್.ನಿಜಗುಣ ಭಾಗವಹಿಸುವರು ಎಂದು ಸಂಘಟನೆ ತಿಳಿಸಿದೆ.