ರಘು, ಅಣ್ಣೇಶಿ ಹಾಗೂ ರಮೇಶ್ ಬಂಧಿತರು. ಇವರು ಆಕ್ಸಿಸ್ ಬ್ಯಾಂಕಿನ ಕಿಟಕಿಯ ಸರಳನ್ನು ಯಂತ್ರದಿಂದ ಕತ್ತರಿಸುತ್ತಿದ್ದರು. ಶಬ್ದ ಕೇಳಿ ಅಲ್ಲಿಗೆ ಬಂದ ಬಡಾವಣೆ ಪೊಲೀಸ್ ಠಾಣೆಯ ಸಿಬ್ಬಂದಿ ಧನಂಜಯ ರಾಜ್ ಅರಸ್ ಹಾಗೂ ಸುರೇಶ್ ಎಲ್. ಅವರು ಆರೋಪಿ ಅಣ್ಣೇಶಿಯನ್ನು ಹಿಡಿದು ವಿಚಾರಣೆ ನಡೆಸಿದರು. ಪೊಲೀಸರನ್ನು ಕಂಡ ಆರೋಪಿಗಳಾದ ರಘು, ರಮೇಶ್ ಪರಾರಿಯಾಗಿದ್ದರು. ಬಳಿಕ ಪೊಲೀಸರು ಅಣ್ಣೇಶಿಯೊಂದಿಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಹೋಗಿರಘು, ರಮೇಶ್ ಅವರನ್ನು ಸುತ್ತುವರಿದು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.