‘ಸಮಾಜದ ಬಹುಜನರು ಪೀಠಗಳು ಒಂದಾಗಬೇಕು ಎಂಬ ಆಶಯ ಹೊಂದಿದ್ದಾರೆ. ಮಾನಸಿಕವಾಗಿ ನಾವು ಒಂದಾಗಿಯೇ ಇದ್ದೇವೆ. ಜನರಲ್ಲಿ, ಸ್ವಾಮೀಜಿಗಳಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಆದರೆ, ಮಠಗಳ ಆಡಳಿತ ಮಂಡಳಿಗಳ ಅಭಿಪ್ರಾಯಗಳಲ್ಲಿ ವ್ಯತ್ಯಾಸಗಳಿವೆ. ಅವನ್ನು ಸರಿಪಡಿಸಿ ಪೀಠಗಳನ್ನು ಒಗ್ಗೂಡಿಸುವುದಕ್ಕಾಗಿ ಸಮಾಜದ ಮುಖಂಡ ಮುರುಗೇಶ್ ನಿರಾಣಿ ನೇತೃತ್ವದಲ್ಲಿ ಸಭೆಗಳು ನಡೆದಿವೆ. ಮುಂದೆ ಸಮಾಜದ ಹಿರಿಯರು ಕೈಗೊಳ್ಳುವ ನಿರ್ಧಾರಕ್ಕೆ ಪೀಠ ಬದ್ಧ’ ಎಂದರು.